×
Ad

ಎ.21: ಸುಳ್ಯ ಕ್ಷೇತ್ರದಿಂದ ಬಿಎಸ್‌ಪಿ ಅಭ್ಯರ್ಥಿ ರಘುಧರ್ಮ ಸೇನ ನಾಮಪತ್ರ ಸಲ್ಲಿಕೆ

Update: 2018-04-20 21:08 IST

ಮಂಗಳೂರು, ಎ.20: ಸುಳ್ಯ ಪರಿಶಿಷ್ಟ ಜಾತಿ ಮೀಸಲು ವಿಧಾನ ಸಭಾ ಕ್ಷೇತ್ರದಿಂದ ಬಿಎಸ್‌ಪಿ ಅಭ್ಯರ್ಥಿಯಾಗಿ ರಘು ಧರ್ಮಸೇನ ಎ.21ರಂದು ಬೆಳಗ್ಗೆ 11 ಗಂಟೆಗೆ ಸುಳ್ಯ ನಾಮಪತ್ರ ಸಲ್ಲಿಸಲಿದ್ದಾರೆ.

ಕರ್ನಾಟಕ ಬಹುಜನ ಸಮಾಜ ಪಾರ್ಟಿಯ ಮಂಗಳೂರು ವಲಯದ ಉಸ್ತುವಾರಿ ಹಾಗೂ ಸಂಯೋಜಕರಾದ ಡಾ.ಜಯಪ್ರಕಾಶ್ ರಾಮ್ ಬೆಂಗಳೂರು, ರಾಜ್ಯ ಕಾರ್ಯದರ್ಶಿ ವೇಲಾಯುಧನ್, ಝಾಕಿರ್ ಹುಸೈನ್, ಜಿಲ್ಲಾಧ್ಯಕ್ಷ ಗೋಪಾಲ ಮುತ್ತೂರು, ಜಿಲ್ಲಾ ಸಂಯೋಜಕ ನಾರಾಯಣ ಬೋಧ್ ಹಾಗೂ ಇತರರು ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News