ಭಟ್ಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಮಂಗಳೂರು ಶಾಖೆಯ ಸ್ಥಳಾಂತರ

Update: 2018-04-21 17:53 GMT

ಭಟ್ಕಳ, ಎ. 21: ಕಳೆದ 18 ವರ್ಷಗಳಿಂದ ಮಂಗಳೂರಿನ ನೆಲ್ಲಿಕಾಯಿ ರೋಡ್, ಬಂದರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಟ್ಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಮಂಗಳೂರು ಶಾಖೆಯು ಮಂಗಳೂರಿನ ಕೇಂದ್ರ ಸ್ಥಳವಾದ ಹೆಮಿಲ್ಟನ್ ಸರ್ಕಲ್ ಗೆ ಎ. 23ರಂದು ಸ್ಥಳಾಂತರಗೊಳ್ಳಲಿದೆ.

ಬ್ಯಾಂಕಿನ ಅಧ್ಯಕ್ಷರಾದ  ಅಬ್ದುಲ್ಲಾ ಮಜೀದ್ ಚೌಗುಲೆಯವರು ಸ್ಥಳಾಂತರಿತ ಶಾಖೆಯನ್ನು ಉದ್ಘಾಟಿಸಲಿರುವರು.

ಬ್ಯಾಂಕಿನ ನಿರ್ದೇಶಕ ಮಂಡಳಿಯವರು, ಪ್ರಧಾನ ಕಾರ್ಯನಿರ್ವಾಹಕರು, ಸಹಾಯಕ ಪ್ರಧಾನ ಕಾರ್ಯನಿರ್ವಾಹಕರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿರುವರು. ಗ್ರಾಹಕರಿಗೆ ಇನ್ನೂ ಹೆಚ್ಚಿನ ಸೌಲಭ್ಯವನ್ನು ನೀಡುವ ಉದ್ದೇಶದಿಂದ ಸ್ಥಳಾಂತರಿತ ಶಾಖೆಯಲ್ಲಿ ನೂತನವಾಗಿ ಅಳವಡಿಸಿರುವ ಎಟಿಎಮ್ ಸಹ ಇದೇ ಸಂದರ್ಭದಲ್ಲಿ ಉದ್ಘಾಟನೆಗೊಳ್ಳಲಿದೆ.

ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಬ್ಯಾಂಕಿನ ಗ್ರಾಹಕರು ಉಪಸ್ಥಿತರಿರಬೇಕಾಗಿ ಬ್ಯಾಂಕಿನ ಅಧ್ಯಕ್ಷರಾದ  ಅಬ್ದುಲ್ ಮಜೀದ್ ಚೌಗುಲೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News