ಮಂಗಳೂರು: ​ಸ್ಥಳಾಂತರಿತ ಭಟ್ಕಳ ಅರ್ಬನ್ ಕೋ ಅಪರೇಟಿವ್ ಬ್ಯಾಂಕ್ ಉದ್ಘಾಟನೆ

Update: 2018-04-23 18:09 GMT

ಮಂಗಳೂರು, ಎ. 23: ನಗರದ ನೆಲ್ಲಿಕಾಯಿ ರಸ್ತೆಯಲ್ಲಿ ಕಾರ್ಯಾಚರಿಸುತ್ತಿದ್ದ ಭಟ್ಕಳ ಅರ್ಬನ್ ಕೋ ಅಪರೇಟಿವ್ ಬ್ಯಾಂಕ್ ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿಯ ಹ್ಯಾಮಿಲ್ಟನ್ ಕಾಂಪ್ಲೆಕ್ಸ್‌ನ ಮೊದಲ ಮಹಡಿಗೆ ಸ್ಥಳಾಂತರಗೊಂಡಿತು.

ಬ್ಯಾಂಕಿನ ಅಧ್ಯಕ್ಷ ಅಬ್ದುಲ್ ಮಜೀದ್ ಚೌಗುಲೆ ಅವರು ಸ್ಥಳಾಂತರಿತ ಶಾಖೆಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಶೇಖ್ ಶಬ್ಬರ್, ಲೆಕ್ಕಪರಿಶೋಧಕ ಎಸ್.ಎಸ್.ನಾಯಕ್, ಬ್ಯಾಂಕಿನ ನಿರ್ದೇಶಕರಾದ ಮಾಸ್ತಿ ಮೊಗೇರ್, ಶ್ರೀಧರ ಭೈರಪ್ಪ ನಾಕ್, ಅಬ್ದುಲ್ ಖಾಲಿಕ್ ಸೌಧಾಗರ್, ಕೊಲ ಮುಹಮ್ಮದ್ ಝುಬೇರ್, ಇಮ್ತಿಯಾಝ್ ಅಹ್ಮದ್, ಜಾಫರ್ ಸಾದಿಕ್ ಶಾಬಂದ್ರಿ, ಬ್ರಯಾನ್ ಸಂತೋಷ್ ಡಿಸೋಜಾ, ಪರ್ವಿನ್‌ಬಾಬಿ ಮುಲ್ಲ, ಮೆಹ್ಬೂಬಿ ಪಟೇಲ್, ಪರಿ ಮುಹಮ್ಮದ್ ಹುಸೈನ್ ಮತ್ತು ಬ್ಯಾಂಕಿನ ಮಹಾಪ್ರಬಂಧಕ ಎಸ್.ಅಬ್ದುರ್ರಝಾಕ್, ಸಹಾಯಕ ಮಹಾಪ್ರಬಂಧಕ ಸುಭಾಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News