ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ: ಜೆಡಿಎಸ್‌ನಿಂದ ರತ್ನಾಕರ ಸುವರ್ಣ ನಾಮಪತ್ರ ಸಲ್ಲಿಕೆ

Update: 2018-04-24 11:48 GMT

ಮಂಗಳೂರು, ಎ.24: ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಜೆಡಿಎಸ್ ಮುಖಂಡ ರತ್ನಾಕರ ಸುವರ್ಣ ಮಂಗಳವಾರ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊದಲು ಬಲ್ಲಾಳ್‌ಬಾಗ್‌ನಿಂದ ಮನಪಾ ಕಚೇರಿವರೆಗೆ ಅವರು ರ್ಯಾಲಿ ನಡೆಸಿದರು.

ಈ ಸಂದರ್ಭ ಪಕ್ಷದ ಮುಖಂಡರಾದ ಸುಶೀಲ್ ನೊರೊನ್ಹಾ, ವಸಂತ ಪೂಜಾರಿ, ಕಾರ್ಪೊರೇಟರ್ ರಮೀಝಾ ನಾಸಿರ್, ಇಕ್ಬಾಲ್ ಮುಲ್ಕಿ, ಅಕ್ಷಿತ್ ಸುವರ್ಣ, ರಾಮ್‌ಗಣೇಶ್, ಗೋಪಾಲಕೃಷ್ಣ ಅತ್ತಾವರ, ಪುಷ್ಪರಾಜ್ ಎನ್.ಪಿ., ಇಝಾ ಬಜಾಲ್, ಶಿಲ್ಪಾ ರಮೇಶ್, ಹರೀಶ್ ಪುತ್ರನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News