ಎಸ್‌ವೈಎಸ್ ಕೇರಳ ರಾಜ್ಯ ಉಪಾಧ್ಯಕ್ಷ ಡಾ.ಇಬ್ರಾಹೀಂ ಹಾಜಿ ನಿಧನ

Update: 2018-04-24 15:17 GMT

ಮಂಜೇಶ್ವರ, ಎ.24: ಉದ್ಯಮಿ, ಧಾರ್ಮಿಕ ಮುಂದಾಳು ಕಾಸರಗೋಡು ಕಳನಾಡು ನಿವಾಸಿ ಕತರ್ ಡಾ.ಇಬ್ರಾಹೀಂ ಹಾಜಿ(75) ಮಂಗಳವಾರ ಸಂಜೆ ನಿಧನರಾಗಿದ್ದಾರೆ.

ಒಂದು ವರ್ಷದಿಂದ ಅನಾರೋಗ್ಯಕ್ಕೊಳಗಾಗಿದ್ದ ಡಾ.ಇಬ್ರಾಹೀಂ ಹಾಜಿ, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. 3 ದಿನಗಳ ಹಿಂದೆ ಅವರನ್ನು ದೇಳಿ ಸಅದಿಯ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಸಂಜೆ ಅವರು ಕೊನೆಯುಸಿರೆಳೆದಿದ್ದಾರೆ.

ಎಸ್.ವೈ.ಎಸ್. ಕೇರಳ ರಾಜ್ಯ ಸಮಿತಿಯ ಉಪಾಧ್ಯಕ್ಷರಾಗಿದ್ದ ಡಾ.ಇಬ್ರಾಹೀಂ ಹಾಜಿ, ಮುಸ್ಲಿಂ ಲೀಗ್  ಜಿಲ್ಲಾ ಸಮಿತಿ ಸದಸ್ಯರಾಗಿದ್ದರು. ಕಳ್ನಾಡ್ ಮುಸ್ಲಿಂ ಜಮಾ ಅತ್  ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕಾಸರಗೋಡು ಮಲಬಾರ್ ಇಸ್ಲಾಮಿಕ್ ಕಾಂಪ್ಲೆಕ್ಸ್‌ನ ಕೋಶಾಧಿಕಾರಿ, ಎಸ್.ಎಂ.ಎಫ್. ಜಿಲ್ಲಾ ಉಪಾಧ್ಯಕ್ಷ, ಕೀಝೂರ್ ಸಂಯುಕ್ತ ಜಮಾಅತ್ ಸಮಿತಿಯ ಸೀನಿಯರ್ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಮೃತರು  ಪತ್ನಿ, ಏಳು ಮಂದಿ ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News