ಎನ್‌ಸಿಪಿಯ ಇಬ್ಬರು ಕಾರ್ಯಕರ್ತರ ಹತ್ಯೆ

Update: 2018-04-29 16:25 GMT

ಅಹ್ಮದಾನಗರ, ಎ. 29: ಇಬ್ಬರು ಎನ್‌ಸಿಪಿ ಕಾರ್ಯಕರ್ತರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದ ಘಟನೆ ಜಿಲ್ಲೆಯಲ್ಲಿ ಶನಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇಬ್ಬರು ಸ್ಥಳೀಯ ಶಿವಸೇನೆ ನಾಯಕರನ್ನು ಹತ್ಯೆಗೈದ ಮೂರು ವಾರಗಳ ಬಳಿಕ ಈ ಘಟನೆ ನಡೆದಿದೆ.

ಇಲ್ಲಿಂದ 70 ಕಿ.ಮೀ. ದೂರದಲ್ಲಿರುವ ಜಾಮ್‌ಖೇಡ್ ಪಟ್ಟಣದ ಹೆದ್ದಾರಿಯಲ್ಲಿ ಇಬ್ಬರು ಎನ್‌ಸಿಪಿ ಕಾರ್ಯಕರ್ತರು ನಿಂತುಕೊಂಡಿದ್ದರು. ಈ ಸಂದರ್ಭ ಮೋಟಾರು ಸೈಕಲ್‌ನಲ್ಲಿ ಆಗಮಿಸಿದ ಮೂವರು ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದರು. ಸಂಜೆ 6.30ರ ಹೊತ್ತಿಗೆ ಈ ಘಟನೆ ನಡೆದಿದ್ದು, ದುಷ್ಕರ್ಮಿಗಳು ಆರು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಜಿಲ್ಲೆಯ ಪೊಲೀಸ್ ಅಧೀಕ್ಷಕ ರಂಜನ್‌ಕುಮಾರ್ ಶರ್ಮಾ ಹೇಳಿದ್ದಾರೆ. ಮೃತಪಟ್ಟ ಇಬ್ಬರು ಜಾಮ್‌ಖೇಡಾದವರು. ಅವರನ್ನು ಎನ್‌ಸಿಪಿಯ ಯುವ ಘಟಕದ ಉಪಾಧ್ಯಕ್ಷ ಯೋಗೇಶ್ ಅಂಬಾದಾಸ್ ರಾಲೇಭಟ್ (30) ಹಾಗೂ ಜಾಮ್‌ಖೇಡ್ ಘಟಕದ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಪದಾಧಿಕಾರಿ ಅರ್ಜುನ್ ರಾಲೇಭಟ್ (23) ಎಂದು ಗುರುತಿಸಲಾಗಿದೆ ಎಂದು ಶರ್ಮಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News