ಪುತ್ತೂರು: ಚುನಾವಣೆ ವೀಕ್ಷಕರಿಂದ ಚುನಾವಣಾ, ಪೊಲೀಸ್ ಸೆಕ್ಟರ್ ಗಳ ಸಭೆ

Update: 2018-04-30 12:51 GMT

ಪುತ್ತೂರು,ಎ.30: ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಕಂದಾಯ ಇಲಾಖೆಯ ಚುನಾವಣಾ ಸೆಕ್ಟರ್‍ಗಳಿಗೆ ಮತ್ತು ಪೊಲೀಸ್ ಸೆಕ್ಟರ್ ಗಳ ವಿಶೇಷ ಸಭೆ ಸೋಮವಾರ ಬೆಳಿಗ್ಗೆ ಪುತ್ತೂರು ಮಿನಿವಿಧಾನ ಸೌಧದಲ್ಲಿನ ಸಹಾಯಕ ಕಮೀಷನರ್ ಕಚೇರಿ ಹಾಲ್‍ನಲ್ಲಿ ನಡೆಯಿತು.

ಚುನಾವಣಾ ವೀಕ್ಷಕ ಜಗದೀಶ್ ಪ್ರಸಾದ್, ಚುನಾವಣಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ, ತಹಶೀಲ್ದಾರ ಅನಂತಶಂಕರ್, ಡಿ.ವೈ.ಎಸ್ಪಿ ಶ್ರೀನಿವಾಸ್ ಸೆಕ್ಟರ್‍ಗಳು ಮತ್ತು ಪೊಲೀಸ್ ಸೆಕ್ಟರ್ ಗಳಿಗೆ ಚುನಾವಣೆಗೆ ಸಂಬಂಧಿಸಿ ಪೂರ್ವ ತಯಾರಿಯ ವಿವಿಧ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News