ಶ್ರೀಪದ ರಾವ್ ಭರತನಾಟ್ಯ ರಂಗಪ್ರವೇಶ

Update: 2018-05-19 16:49 GMT

ಉಡುಪಿ, ಮೇ 19: ರಾಧಾಕೃಷ್ಣ ನೃತ್ಯನಿಕೇತನದ ನೃತ್ಯ ವಿಧುಷಿ ಶ್ರೀಪ್ರದ ರಾವ್ ಇವರ ರಂಗಪ್ರವೇಶ ಕಾರ್ಯಕ್ರಮ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಇಂದು ಸಂಜೆ ನಡೆಯಿತು.

ಕಾರ್ಯಕ್ರಮವನ್ನು ಪರ್ಯಾಯ ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಹಾಗೂ ಅದಮಾರು ಕಿರಿಯ ಯತಿ ಗಳಾದ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು ಉದ್ಘಾಟನೆ ಮಾಡಿ ಅನುಗ್ರಹ ವಚನ ನೀಡಿದರು.

ಸಮಾರಂಭದಲ್ಲಿ ಡಾ.ರವೀಂದ್ರನಾಥ್ ಶೆಟ್ಟಿ, ರೇಖಾ ಭಗವಾನ್ ಬೆಂಗಳೂರು, ಡಾ.ವೀಣಾ ಭಟ್ ನಿಟ್ಟೆ, ರಾಧಾಕೃಷ್ಣ ನೃತ್ಯ ನಿಕೇತನದ ನೃತ್ಯ ವಿಧುಷಿ ವೀಣಾ ಎಂ.ಸಾಮಗ, ಸತೀಶ್ ರಾವ್, ಮನೋರಮಾ ರಾವ್, ರಾಜೇಂದ್ರ ರಾವ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News