ಅತ್ತೂರು ದೇವಳದಲ್ಲಿ ಕಳವು
Update: 2018-05-20 16:48 GMT
ಕಾರ್ಕಳ, ಮೇ 20: ನಿಟ್ಟೆ ಗ್ರಾಮದ ಅತ್ತೂರು ರಾಜರಾಜೇಶ್ವರಿ ದೇವಸ್ಥಾನಕ್ಕೆ ಮೇ 19ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ದೇವಸ್ಥಾನದ ಗರ್ಭಗುಡಿ ಹಾಗೂ ನಿತ್ಯಾನಂದ ಸ್ವಾಮಿಯ ಮೂರ್ತಿ ಇರುವ ಕೋಣೆಯ ಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿದ ಕಳ್ಳರು, ಬೆಳ್ಳಿಯ ಪಾದುಕೆ, ಬೆಳ್ಳಿಯ ಪ್ರಭಾವಳಿ, ಚಿನ್ನದ ಸುದರ್ಶನ ಚಕ್ರ, ಬೆಳ್ಳಿಯ ಹರಿವಾಣ ಮತ್ತು ತೀರ್ಥತಟ್ಟೆ ಹಾಗೂ ಎರಡು ಕಾಣಿಕೆ ಡಬ್ಬದಲ್ಲಿದ್ದ ಚಿಲ್ಲರೆ ಹಣವನ್ನು ಕಳವು ಮಾಡಿದ್ದಾರೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 75,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.