'ಯುನಿವೆಫ್'ನಿಂದ ರಮಝಾನ್ ಪ್ರವಚನ ಕಾರ್ಯಕ್ರಮ

Update: 2018-05-22 11:38 GMT

ಮಂಗಳೂರು,ಮೇ 22: 'ಯುನಿವೆಫ್ ಕರ್ನಾಟಕ' ಇದರ ಮಂಗಳೂರು ಶಾಖೆಯ ವತಿಯಿಂದ ಎರಡು ದಿನಗಳ ರಮಝಾನ್ ಪ್ರಭಾಷಣ ಕಾರ್ಯಕ್ರಮವನ್ನು ಮೇ 23 ಬುಧವಾರ ಮತ್ತು ಮೇ 24 ಗುರುವಾರದಂದು  ಫಳ್ನೀರ್ ನ  ಲುಲು ಸೆಂಟರ್ ನಲ್ಲಿರುವ ದಾರುಲ್ ಇಲ್ಮ್ ನಲ್ಲಿ ಝುಹರ್ ನಮಾಝಿನ ನಂತರ (ಮಧ್ಯಾಹ್ನ 1.15 ಗಂಟೆಗೆ) ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ 'ಯುನಿವೆಫ್ ಕರ್ನಾಟಕ' ರಾಜ್ಯಾಧ್ಯಕ್ಷ ರಫೀಉದ್ದೀನ್ ಕುದ್ರೋಳಿಯವರು ಮೇ 23 ರಂದು 'ಸಹಾಬಾಗಳ ಪಥ' ಎಂಬ ವಿಷಯದಲ್ಲಿ ಮತ್ತು ಮೇ 24 ರಂದು 'ಅಲ್ಲಾಹನ ಮಾರ್ಗದ ತ್ಯಾಗ ಬಲಿದಾನ' ಎಂಬ ವಿಷಯದಲ್ಲೂ ಉಪನ್ಯಾಸ ನೀಡಲಿದ್ದಾರೆ.

ಸ್ತ್ರೀಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆಯನ್ನೂ ಮಾಡಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಯುನಿವೆಫ್ ಮಂಗಳೂರು ಶಾಖಾಧ್ಯಕ್ಷ ನೌಫಲ್ ಹಸನ್ ಪ್ರಕಟಣೆಯಲ್ಲಿ ವಿನಂತಿಸಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News