ಎಲ್ಲೂರು: ಜೂ.1ರಂದು ಮಾಸಿಕ ದ್ಸಿಕ್ರ್
Update: 2018-05-23 14:51 GMT
ಮಂಗಳೂರು, ಮೇ 23: ದಾರುಲ್ ಅಮಾನ್ ಎಜುಕೇಶನಲ್ ಅಕಾಡಮಿ ವತಿಯಿಂದ ಪ್ರತಿ ತಿಂಗಳಿನಂತೆ ಮುಂದಿನ ಜೂ. 1ರಂದು ಮಧ್ಯಾಹ್ನ 3 ಗಂಟೆಗೆ ಉಚ್ಚಿಲ ಸಮೀಪದ ಎಲ್ಲೂರಿನ ಹಿರಾ ನಗರದಲ್ಲಿ ಮಾಸಿಕ ದ್ಸಿಕ್ರ್ ಮಜ್ಲಿಸ್ ಮತ್ತು ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಅಕಾಡಮಿಯ ಮುಖ್ಯಸ್ಥ ಅಲ್ಹಾಜ್ ಸಲೀಂ ಮದನಿ ಕುತ್ತಾರ್ ಅವರ ನೇತೃತ್ವದಲ್ಲಿ ದ್ಸಿಕ್ರ್ ಮಜ್ಲಿಸ್ ಮತ್ತು ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಬಶೀರ್ ಮದನಿ ಕೂಳೂರು ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪ್ರತೀ ತಿಂಗಳ ಮೊದಲ ಶುಕ್ರವಾರದಂದು ನಡೆಯುವ ಈ ದ್ಸಿಕ್ರ್ ಮಜ್ಲಿಸ್ ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಾಲ್ಗೊಳ್ಳುತ್ತಿ ದ್ದಾರೆ ಎಂದು ಪ್ರಕಟನೆ ತಿಳಿಸಿದೆ.