ಉದಯೋನ್ಮುಖ ಲೇಖಕಿ ಪ್ರಜ್ಞಾ ಜಿ.ಕೆ. ನಿಧನ

Update: 2018-05-23 15:52 GMT

ಮುಲ್ಕಿ, ಮೇ 23: ಲೇಖಕಿಯಾಗಿ ತನ್ನ ಹೆಜ್ಜೆ ಗುರುತು ಮೂಡಿಸಿದ್ದ ಹಾಗೂ ಭರವಸೆ ಲೇಖಕಿಯಾಗಿ ಬೆಳೆಯುತ್ತಿದ್ದ ಪ್ರಜ್ಞಾ ಜಿ.ಕೆ. (32) ಮಂಗಳವಾರ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಕಿನ್ನಿಗೋಳಿಯ ನಿವೃತ್ತ ಉಪನ್ಯಾಸಕ ಜಿ.ಕೆ. ಭಟ್-ರಾಧಾ ದಂಪತಿ ಪುತ್ರಿ ಯಾಗಿದ್ದ ಪ್ರಜ್ಞಾ, ಮಂಜೇಶ್ವರ ತಾಲೂಕಿನ ವಾಣಿನಗರದ ಜಯಪ್ರಕಾಶ್ ಎಂಬವರನ್ನು ಆರು ವರ್ಷದ ಹಿಂದೆ ಮದುವೆಯಾಗಿದ್ದರು.

ಪ್ರಜ್ಞಾ ಅವರ ಅನೇಕ ಕಥೆ, ಲೇಖನಗಳು ನಾಡಿನ ಪ್ರಮುಖ ದಿನಪತ್ರಿಕೆ ಹಾಗೂ ನಿಯತಕಾಲಿಕಗಳಲ್ಲಿ ಪ್ರಕಟವಾಗಿದ್ದವು. ಅವರು ತಂದೆ, ತಾಯಿ, ಪತಿ ಹಾಗೂ ಮೂರು ತಿಂಗಳ ಹಸುಗೂಸನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News