ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ವ್ಯಕ್ತಿಯನ್ನು ಸಾವೇ ಹುಡುಕಿಕೊಂಡು ಬಂತು

Update: 2018-05-24 04:39 GMT

ಬ್ರಹ್ಮಾವರ, ಮೇ 23: ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ವ್ಯಕ್ತಿಯೊಬ್ಬರನ್ನು ಮನೆಯವರು ರಕ್ಷಿಸಿದರೂ ಸಾವೇ ಹುಡುಕಿಕೊಂಡು ಬಂದ ಘಟನೆ ಬ್ರಹ್ಮಾವರ ಠಾಣೆ ವ್ಯಾಪ್ತಿಯ ಮುದ್ದುಮನೆ ಶೀರೂರು ಗ್ರಾಮ ಹೆಮ್ಮಣ್ಣಿ ಗುಡ್ಡಿಮನೆಯಿಂದ ವರದಿಯಾಗಿದೆ.

ಇಲ್ಲಿನ ನಿವಾಸಿ ಅರ್ಜುನ ನಾಯ್ಕ (55) ಅವರಿಗೆ ವಿಪರೀತ ಮದ್ಯಪಾನ ಮಾಡುವ ಛಟವಿದ್ದು, ನಿನ್ನೆ ರಾತ್ರಿ ಮದ್ಯಪಾನ ಮಾಡಿ ಬಂದು ''ನಾನು ಜೀವ ತೆಗೆದುಕೊಳ್ಳುತ್ತೇನೆ'' ಎಂದು ಹೇಳಿ ಒಂದು ಹಗ್ಗ ತೆಗೆದುಕೊಂಡು ಹೋಗಿ ಅದರಿಂದ ಗೇರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಆದರೆ ಅವರ ಕಾಲು ನೆಲಕ್ಕೆ ತಾಗಿಕೊಂಡಿದ್ದು, ಮನೆಯವರು ಬಂದು ಕುತ್ತಿಗೆಯಲ್ಲಿದ್ದ ಬಳ್ಳಿಯನ್ನು ಬಿಡಿಸಿದ್ದು, ಅಲ್ಲಿಂದ ಸ್ವಲ್ಪ ದೂರ ನಡೆದುಕೊಂಡು ಹೋದ ಅರ್ಜುನ ನಾಯ್ಕ, ಆಯ ತಪ್ಪಿ ನೆಲಕ್ಕೆ ಬಿದ್ದುಬಿಟ್ಟರು.

ನೆಲಕ್ಕೆ ಬೀಳುವ ವೇಳೆ ಅವರ ತಲೆಗೆ ಕಲ್ಲೊಂದು ಬಡಿದು ಗಾಯಗೊಂಡು ಇದರಿಂದ ಅವರು ಮೃತಪಟ್ಟರು ಎಂದು ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News