ಮನೆಗೆ ನುಗ್ಗಿ ಆಭರಣ ಕಳವು
Update: 2018-05-24 21:14 IST
ಮಣಿಪಾಲ, ಮೇ 24: ಮಣಿಪಾಲ ಅನಂತನಗರದ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯ ಚಿನ್ನ ಹಾಗೂ ಬೆಳ್ಳಿಯ ಆಭರಣ ಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಮೇ 21ರಿಂದ ಮೇ 23ರ ಮಧ್ಯಾವಧಿಯಲ್ಲಿ ಅನಂತನಗರದ ಭಾಸ್ಕರ ಶೆಟ್ಟಿ ಎಂಬವರ ಮನೆಯ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಗೊದ್ರೇಜ್ ಕಪಾಟಿನೊಳಗಿದ್ದ 2,50,000ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣ ಗಳನ್ನು ಕಳವುಗೈದಿದ್ದಾರೆಂದು ತಿಳಿದುಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.