ಛಾವಣಿಯಿಂದ ಬಿದ್ದು ಮೃತ್ಯು

Update: 2018-05-26 16:42 GMT

ಕೊಲ್ಲೂರು, ಮೇ 26: ಕೊಲ್ಲೂರು ಶ್ರೀಮೂಕಾಂಬಿಕಾ ವಿದ್ಯಾರ್ಥಿನಿ ನಿಲಯದ ಛಾವಣಿಯ ಮೇಲೆ ನಿಂತು ಪೈಂಟಿಂಗ್ ಮಾಡುತ್ತಿದ್ದಾಗ ವ್ಯಕ್ತಿ ಯೊಬ್ಬರು ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಮೇ 25ರಂದು ಸಂಜೆ ವೇಳೆ ನಡೆದಿದೆ.

ಮೃತರನ್ನು ಪಡುಬಿದ್ರೆ ಬೇಂಗ್ರೆ ರಸ್ತೆಯ ರಾಕೇಶ್(30) ಎಂದು ಗುರುತಿಸ ಲಾಗಿದೆ. ಇವರು ವಿದ್ಯಾರ್ಥಿನಿ ನಿಲಯದ ಛಾವಣಿಯಲ್ಲಿ ಆಧಾರ ಸ್ತಂಭದ ಮೇಲೆ ನಿಂತು ಪೈಂಟಿಂಗ್ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಆಯತಪ್ಪಿ ಸುಮಾರು 8 ಅಡಿ ಎತ್ತರದಿಂದ  ಸ್ಲಾಬ್ ಮೇಲೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಇವರು ಕುಂದಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News