ಜೂ.10ರಂದು ಜಿಲ್ಲಾ ವರ್ತಕರ ಸಮಾವೇಶ

Update: 2018-05-27 09:44 GMT

ಉಡುಪಿ, ಮೇ 27: ಉಡುಪಿ ಜಿಲ್ಲಾ ವರ್ತಕರ ಸಂಘದ ವತಿಯಿಂದ ವರ್ತಕರ ಸಮಾವೇಶವನ್ನು ಜೂ.10ರಂದು ಅಪರಾಹ್ನ 3 ಗಂಟೆಗೆ ಅಂಬಲಪಾಡಿ ದೇವಸ್ಥಾನದ ಭವಾನಿ ಮಂಟಪದಲ್ಲಿ ಆಯೋಜಿಸಲಾಗಿದೆ.

ಸಮಾವೇಶವನ್ನು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ. ವಿಜಯ ಬಲ್ಲಾಳ್ ಉದ್ಘಾಟಿಸಲಿರುವರು. ಸಂಘದ ವಿದ್ಯಾದಾನ ಯೋಜನೆಯಡಿ ಉಚಿತ ಪುಸ್ತಕ ವಿತರಣೆ, ಸಪ್ತಪದಿ ಯೋಜನೆಯಡಿ ಮದುವೆಗೆ ಸಹಕಾರ, ಗಾಯತ್ರಿ ಯೋಜನೆಯಡಿ ಉಪನಯನಕ್ಕೆ ಸಹಕಾರ, ಆಶ್ರಯ ಯೋಜನೆಯಡಿ ಗೃಹ ಪ್ರವೇಶಕ್ಕೆ ನೆರವು, ಕಲ್ಪವೃಕ್ಷ ಯೋಜನೆಯಡಿ ಊರು ಹಸಿರುಗೊಳಿಸಲು ಸಹಕಾರ, ಸಹೋದರ ಭಾಗ್ಯ ಯೋಜನೆಯಡಿ ಉಚಿತ ರಕ್ಷಾ ಬಂಧನ ವಿತರಣೆ, ಆರೋಗ್ಯ ದಾನ ಯೋಜನೆಯಡಿ ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡಲಾಗುವುದು. ಹೂನಿನ ಹೆಸರು ಬರೆಯುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಗುವುದು ಎಂದು ಅಧ್ಯಕ್ಷ ಐರೋಡಿ ಸಹನಶೀಲ ಪೈ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News