ತೂತುಕುಡಿ: ಸ್ಟರ್ಲೈಟ್ ಸ್ಥಾವರ ಶಾಶ್ವತವಾಗಿ ಮುಚ್ಚಲು ತಮಿಳುನಾಡು ಸರಕಾರದ ಆದೇಶ

Update: 2018-05-28 12:32 GMT

ತೂತುಕುಡಿ, ಮೇ 28: ಇಲ್ಲಿನ ಸ್ಟರ್ಲೈಟ್ ತಾಮ್ರ ಸ್ಥಾವರವನ್ನು ಶಾಶ್ವತವಾಗಿ ಮುಚ್ಚುವಂತೆ ತಮಿಳುನಾಡು ಸರಕಾರವು ಸೋಮವಾರ ಆದೇಶಿಸಿದೆ, ಸ್ಥಾವರವನ್ನು ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಪೊಲೀಸ್ ಗೋಲಿಬಾರ್ ಗೆ 13 ಮಂದಿ ಮೃತಪಟ್ಟ ಕೆಲ ದಿನಗಳ ನಂತರ ಈ ಆದೇಶ ಹೊರಬಿದ್ದಿದೆ.

ಫ್ಯಾಕ್ಟರಿಗೆ ಬೀಗ ಜಡಿಯುವಂತೆ ರಾಜ್ಯ ಸರಕಾರವು ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಿದೆ. “ತಾಮ್ರ ಸ್ಥಾವರವನ್ನು ಮುಚ್ಚಬೇಕೆಂಬ ಜನರ ಬೇಡಿಕೆಯನ್ನು ಇಂದು ಪಾಲಿಸಲಾಗಿದೆ. ಇದೀಗ ಫ್ಯಾಕ್ಟರಿ ಮುಚ್ಚಿದೆ. ಶಾಶ್ವತವಾಗಿ ಸ್ಥಾವರವನ್ನು ಮುಚ್ಚಲಾಗುವುದು ಎಂದು ನಾನು ಈ ಮೂಲಕ ಭರವಸೆ ನೀಡುತ್ತೇನೆ” ಎಂದು ಉಪಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಹೇಳಿದ್ದಾರೆ,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News