ಉತ್ತರ ಪ್ರದೇಶ: ಗುಡುಗುಸಹಿತ ಭಾರೀ ಮಳೆ; 15 ಮಂದಿ ಮೃತ್ಯು

Update: 2018-05-29 13:03 GMT

ಲಕ್ನೋ, ಮೇ 29: ಇಂದು ಸುರಿದ ಗುಡುಗುಸಹಿತ ಭಾರೀ ಮಳೆಗೆ ಉತ್ತರ ಪ್ರದೇಶದಲ್ಲಿ 15 ಮಂದಿ ಬಲಿಯಾಗಿದ್ದು, 10 ಮಂದಿ ಗಾಯಗೊಂಡಿದ್ದಾರೆ.

“ಸಿಡಿಲು ಬಡಿದು ಉನ್ನಾವೋದಲ್ಲಿ 6 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ರಾಯ್ ಬರೇಲಿಯಲ್ಲಿ ಮೂವರು ಹಾಗು ಕಾನ್ಪುರ, ಪಿಲಿಭಿಟ್ ಹಾಗು ಗೊಂಡಾ ಜಿಲ್ಲೆಗಳಲ್ಲಿ ತಲಾ ಇಬ್ಬರು ಮೃತಪಟ್ಟಿದ್ದಾರೆ” ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಗಾಯಗೊಂಡವರಲ್ಲಿ ಉನ್ನಾವೋದ ನಾಲ್ವರು, ಕನೌಜ್ ಹಾಗು  ರಾಯ್ ಬರೇಲಿಯ ಇಬ್ಬರು ಸೇರಿದ್ದಾರೆ. ಸಿಡಿಲಿನಿಂದ ಅಪಾರ ಹಾನಿ ಸಂಭವಿಸಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News