ಬೈಕಂಪಾಡಿ: ನೆರೆ ಸಂತ್ರಸ್ತರಿಗೆ ಇಪ್ತಾರ್ ವ್ಯವಸ್ಥೆ

Update: 2018-05-29 15:41 GMT

ಬೈಕಂಪಾಡಿ, ಮೇ 29: ಇಂದು ಸುರಿದ ತೀವ್ರ ಮಳೆಗೆ ಬೈಕಂಪಾಡಿ, ಅಂಗರಗುಂಡಿಯ ಕೆಳ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡು ನಾಗರಿಕರು ತೀವ್ರ ಸಂಕಷ್ಟಕ್ಕೀಡಾದರು.

ರಮಝಾನ್ ಉಪವಾಸ ನಿರತ ಇಲ್ಲಿನ ನಿವಾಸಿಗಳ ಮನೆಯ ಎಲ್ಲಾ ದಿನಸಿ ಸಾಮಗ್ರಿಗಳು ನೀರಿನಲ್ಲಿ ಕೊಚ್ಚಿ ಹೋದವು. ಈ ಹಿನ್ನೆಲೆಯಲ್ಲಿ ನೆರವಿಗೆ ಧಾವಿಸಿದ ಬೈಕಂಪಾಡಿ ಮೊಹಿಯುದ್ದೀನ್ ಜುಮಾ ಮಸೀದಿ ಕಮಿಟಿಯು, ನೆರೆ ಸಂತ್ರಸ್ತ ಎಲ್ಲಾ ಕುಟುಂಬಗಳಿಗೆ ಇಂದಿನ ಇಪ್ತಾರ್ ವ್ಯವಸ್ಥೆಯನ್ನು ಹಾಗೂ ರಾತ್ರಿ ಊಟವನ್ನು ತಯಾರಿಸಿ, ಸಂತ್ರಸ್ತರ ಮನೆ ಬಾಗಿಲಿಗೆ ಹೋಗಿ ನೀಡಿತು. ಸ್ಥಳೀಯ ಯುವಕರು  ಸಂತ್ರಸ್ತರಿಗೆ ನೆರವು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News