ಸಚಿವ ಧರ್ಮೇಂದ್ರ ಪ್ರಧಾನ್ ರಿಂದ ಹಿರಿಯ ಅಧಿಕಾರಿ ವಿರುದ್ಧ ವೈಯಕ್ತಿಕ ಟೀಕೆ: ಐಎಎಸ್ ಅಧಿಕಾರಿಗಳ ಆಕ್ರೋಶ
Update: 2018-05-29 16:35 GMT
ಹೊಸದಿಲ್ಲಿ, ಮೇ 29: ಕೇಂದ್ರದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹಿರಿಯ ಅಧಿಕಾರಿಯೊಬ್ಬರನ್ನು ವೈಯಕ್ತಿಕವಾಗಿ ಗುರಿಯಾಗಿಸಿಕೊಂಡಿದ್ದಾರೆ ಎಂದು ಒಡಿಶಾದ ಐಎಎಸ್ ಅಧಿಕಾರಿಗಳ ಸಂಘ ಆರೋಪಿಸಿದೆ.
ಮೇ 28ರಂದು ಭುವನೇಶ್ವರದಲ್ಲಿ ಎನ್ಐಸಿಯ ರಾಷ್ಟ್ರೀಯ ದತ್ತಾಂಶ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಆಹ್ವಾನದ ಮೇರೆಗೆ ಭಾಗವಹಿಸಿದ್ದ ರಾಜ್ಯಸರಕಾರದ ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ವೈಯಕ್ತಿಕ ಟೀಕೆ ಮಾಡಿದ್ದಾರೆ. ಇದು ಅಧಿಕಾರಿಗಳ ನೈತಿಕ ಸ್ಥೈರ್ಯವನ್ನು ಕುಂದಿಸುತ್ತದೆ. ಆದ್ದರಿಂದ ಈ ವಿಷಯವನ್ನು ಸೂಕ್ತ ಹಂತದಲ್ಲಿ ನಿರ್ವಹಿಸಿ ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಒಡಿಶಾದ ಐಎಎಸ್ ಅಧಿಕಾರಿಗಳ ಸಂಘ ತಿಳಿಸಿದೆ. ಅಲ್ಲದೆ ಘಟನೆಯನ್ನು ಖಂಡಿಸಿದ್ದು ರಾಜ್ಯ ಸರಕಾರದ ಸಿಬ್ಬಂದಿಗಳು ಭವಿಷ್ಯದಲ್ಲಿ ಇಂತಹ ಸಂದರ್ಭ ಎದುರಿಸಬೇಕಾಗಿ ಬಂದರೆ ಅವರಿಗೆ ಸಂಘವು ಬೆಂಬಲ ನೀಡುತ್ತದೆ ಎಂದು ತಿಳಿಸಿದೆ.