ಚಡಗ ಸ್ಮಾರಕ ಕಾದಂಬರಿ ಪ್ರಶಸ್ತಿಗೆ ಅರ್ಜಿ ಆಹ್ವಾನ

Update: 2018-06-06 16:35 GMT

ಉಡುಪಿ, ಜೂ.6: ಕೋಟೇಶ್ವರದ ಎನ್.ಆರ್.ಎ.ಎಮ್.ಎಚ್. ಪ್ರಕಾಶನ ಸಂಸ್ಥೆ, ಕನ್ನಡದ ಹೆಸರಾಂತ ಕಾದಂಬರಿಕಾರ, ಸಂಘಟಕ ದಿ.ಪಾಂಡೇಶ್ವರ ಸೂರ್ಯನಾರಾಯಣ ಚಡಗರ ನೆನಪಿನಲ್ಲಿ ಕೊಡುವ ವಾರ್ಷಿಕ ಶ್ರೇಷ್ಠ ಕಾದಂಬರಿ ಪ್ರಶಸ್ತಿಗೆ 2017ರಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟವಾದ ಕಾದಂಬರಿಗಳನ್ನು ಲೇಖಕ/ಪ್ರಕಾಶಕರಿಂದ ಆಹ್ವಾನಿಸಿದೆ.

ಸಾಮಾಜಿಕ ಸ್ವಾಸ್ಥವನ್ನು ಕಾಪಾಡುವ ಕಥಾಹಂದರವನ್ನು ಕಾದಂಬರಿ ಒಳಗೊಂಡಿರುವುದು ಅಗತ್ಯ. ಸ್ಪರ್ಧೆಗಾಗಿ ಬಂದ ಕಾದಂಬರಿಗಳಲ್ಲಿ ಮೊದಲನೆಯ ಸುತ್ತಿನಲ್ಲಿ ಆಯ್ಕೆಯಾದ ಆರೇಳು ಕಾದಂಬರಿಗಳನ್ನು ಮೂವರು ತೀರ್ಪುಗಾರರ ಸಮಿತಿಯ ಪರಿಶೀಲನೆಗೆ ಒಳಪಡಿಸಿ ಅವುಗಳಲ್ಲಿ ಒಂದನ್ನು ಶ್ರೇಷ್ಠ ಕಾದಂಬರಿ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗುತ್ತದೆ. ಪ್ರಶಸ್ತಿಯು ಪ್ರಶಸ್ತಿ ಫಲಕ, ಸ್ಮರಣಿಕೆ ಹಾಗೂ ಹತ್ತು ಸಾವಿರ ರೂ. ನಗದನ್ನು ಒಳಗೊಂಡಿರುತ್ತದೆ.

 ಒಮ್ಮೆ ಈ ಪ್ರಶಸ್ತಿ ಪಡೆದವರು ಪುನಃ ಇದರಲ್ಲಿ ಭಾಗವಹಿಸುವಂತಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತ ಲೇಖಕ/ಪ್ರಕಾಶಕರು ಆಗಸ್ಟ್ ಎರಡನೆಯ ವಾರದೊಳಗೆ ತಲುಪುವಂತೆ ಈ ಕೆಳಗಿನ ವಿಳಾಸಕ್ಕೆ ತಮ್ಮ ಕಾದಂಬರಿಯ ನಾಲ್ಕು ್ರತಿಗಳನ್ನು ಕಳುಹಿಸಿಕೊಡಬೇಕು.
 ವಿಳಾಸ: ಕೆ.ಶಾರದ ಭಟ್, ಸಂಚಾಲಕಿ, ಪ್ರಶಸ್ತಿ ಸಮಿತಿ, 58, ಶಾಂತಾನಂದ ರೆಸಿಡೆನ್ಸಿ, ಮಿಶನ್ ಆಸ್ಪತ್ರೆ ರಸ್ತೆ, ಉಡುಪಿ-576101 (ಮೊ:9449233462)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News