ಎಲ್ಲೂರು ದೇವಾಲಯದಲ್ಲಿ ಕಳ್ಳತನ

Update: 2018-06-08 09:37 GMT

ಮೂಡುಬಿದಿರೆ, ಜೂ. 8 ಇತಿಹಾಸ ಪ್ರಸಿದ್ಧ ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ವೀರಾಂಜನೇಯ ಸನ್ನಿಧಿಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನ, ಬೆಳ್ಳಿ ಪರಿಕರಗಳನ್ನು ಕಳವುಗೈದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.

ಶುಕ್ರವಾರ ಬೆಳಗ್ಗೆ ಅರ್ಚಕ ಸತ್ಯನಾರಾಯಣ ಆಚಾರ್ಯರು ಸನ್ನಿಧಿಗೆ ಆಗಮಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಆಂಜನೇಯ ಗುಡಿಯ ಬಾಗಿಲು ಮುರಿದ ಕಳ್ಳರು ಆಂಜನೇಯ ವಿಗ್ರಹಕ್ಕೆ ಹೊದಿಸಲಾದ ಬೆಳ್ಳುಯ ಕವವಚ, ಪ್ರಭಾವಳಿ ಹಾಗೂ ಚಿನ್ನದ ಸರ ಕಾಲು ದೀಪಗಳನ್ನು ಕದ್ದೊಯ್ದಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಪಡುಬಿದ್ರೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News