ಮೋದಿ ಹತ್ಯೆಗೆ ಸಂಚು ಆರೋಪ: ಉಡುಪಿ ಜಿಲ್ಲಾ ಬಿಜೆಪಿ ಖಂಡನೆ
Update: 2018-06-09 15:55 GMT
ಉಡುಪಿ, ಜೂ.9: ವಿಶ್ವದಾದ್ಯಂತ ಅತ್ಯಂತ ಪ್ರಭಾವಿ ಎನಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿರುವ ಮಾವೋವಾದಿಗಳ ಕುಕೃತ್ಯವನ್ನು ಉಡುಪಿ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸಿದೆ.
ಮೋದಿ ಹತ್ಯೆಗೆ ಸಂಚು ನಡೆಯುತ್ತಿರುವ ವಿಷಯ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತದ ಪ್ರತಿಯೊಬ್ಬ ಪ್ರಜೆಯನ್ನು ಅತಂಕಕ್ಕೀಡುಮಾಡಿದೆ. ದೇಶದ ಕೋಟ್ಯಾಂತರ ಜನತೆಯ ಆರ್ಶೀವಾದ ಮೋದಿ ಜತೆಗಿರುವಾಗ ದುಷ್ಟ ಶಕ್ತಿಗಳ ಯಾವುದೇ ಹೇಯ ಕೃತ್ಯಗಳ ಚಿಂತನೆ ಫಲ ನೀಡದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.