ಮಂಗಳೂರು: ಪ್ರತಿ ಮಂಗಳವಾರ ಆರ್ಟಿಓ ಕಚೇರಿಯಲ್ಲಿ ಜನಸ್ಪಂದನ ದಿನ
Update: 2018-06-11 21:16 IST
ಮಂಗಳೂರು, ಜೂ.11: ಮಂಗಳೂರು ಆರ್ಟಿಓ ಕಚೇರಿಯಲ್ಲಿ ಸಾರಿಗೆ ಇಲಾಖೆಗೆ ಸಂಬಂಧಪಟ್ಟಂತೆ ಸಾರ್ವಜನಿಕ ಅಹವಾಲು, ಕುಂದು ಕೊರತೆಗಳನ್ನು ಆಲಿಸಿ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ (ಆರ್.ಟಿ.ಎ.ವಿಷಯವನ್ನು ಹೊರತು ಪಡಿಸಿ) ಪ್ರತಿ ಮಂಗಳವಾರ ಜನಸ್ಪಂದನ ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸದರಿ ಕಾರ್ಯಕ್ರಮವನ್ನು ಆರ್ಟಿಒ ಕಚೇರಿಯ ಸಭಾಂಗಣದಲ್ಲಿ ಬೆಳಗ್ಗೆ 10:30 ರಿಂದ 11:30 ರವರೆಗೆ ನಡೆಸಲಾಗುವುದು ಎಂದು ಮಂಗಳೂರು ಉಪ ಸಾರಿಗೆ ಆಯುಕ್ತ (ಪ್ರಭಾರ) ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಯವರ ಪ್ರಕಟನೆ ತಿಳಿಸಿದೆ.