ಯುವತಿಗೆ ವಂಚನೆ ಆರೋಪ: ಯುವಕನಿಗೆ ಹಲ್ಲೆ
Update: 2018-06-13 10:50 GMT
ಮಂಗಳೂರು, ಜೂ.13: ಸುಳ್ಳು ಹೇಳಿ ಯುವತಿಯೊಬ್ಬಳನ್ನು ವಿವಾಹವಾದನೆನ್ನಲಾದ ಯುವಕನಿಗೆ ಹಲ್ಲೆ ನಡೆಸಿದ ಘಟನೆ ಬುಧವಾರ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಪಲ ಚಿತ್ರಾಂಜಲಿ ನಗರದಲ್ಲಿ ನಡೆದಿದೆ.
ಸುಳ್ಯ ಮೂಲದ ಸೈಯದ್ ಎಂಬಾತ ನಗರದಲ್ಲಿ ಪರಿಚಯವಾದ ಚಿತ್ರಾಂಜಲಿ ನಗರದ ಯುವತಿಯ ಬಳಿ ತನ್ನನ್ನು ಅರುಣ್ ಪೂಜಾರಿ ಎಂದು ಪರಿಚಯಿಸಿಕೊಂಡು ಎರಡುವರೆ ವರ್ಷದ ಹಿಂದೆ ವಿವಾಹವಾಗಿದ್ದ ಎನ್ನಲಾಗಿದೆ. ಐದು ತಿಂಗಳ ಹಿಂದೆ ಈತನ ಬಗ್ಗೆ ಸಂಶಯಗೊಂಡ ಯುವತಿಯು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಮಧ್ಯೆ ಬುಧವಾರ ಯುವಕನನ್ನು ಮನೆಗೆ ಉಪಾಯದಿಂದ ಕರೆಸಿಕೊಂಡ ಯುವತಿಯ ಮನೆಯವರು ಹಲ್ಲೆ ನಡೆಸಿದ್ದಾರೆ. ಇದೀಗ ಪೊಲೀಸರು ಸೈಯದ್ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.
ತನ್ಮಧ್ಯೆ ಹಲ್ಲೆ ನಡೆಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ವ್ಯಾಪಕ ಚರ್ಚೆಯಾಗುತ್ತಿದೆ.