​ಬೆಂದೂರ್‌ವೆಲ್ ಸರ್ಕಲ್‌ನಲ್ಲಿ ‘ಉಡುಪಿ ನಗರ ಸಂಚಾರ ಪೊಲೀಸ್’ನ ಬೋರ್ಡ್ !

Update: 2018-06-13 11:14 GMT

ಮಂಗಳೂರು, ಜೂ. 13: ನಗರದ ಬೆಂದೂರ್‌ವೆಲ್‌ನ ಸಂತ ಆಗ್ನೆಸ್ ಕಾಲೇಜು ಬಳಿಯಲ್ಲಿ ಅಳವಡಿಸಲಾದ ವೃತ್ತದಲ್ಲಿ ಬುಧವಾರದಿಂದ ದಿಢೀರ್ ಆಗಿ ‘ಉಡುಪಿ ನಗರ ಸಂಚಾರ ಪೊಲೀಸ್’ನ ಬೋರ್ಡ್ ಕಾಣಿಸಿಕೊಂಡಿದೆ. ಇದರಿಂದ ಈ ರಸ್ತೆಯಾಗಿ ಚಲಿಸುವ ವಾಹನಿಗರು ಅಚ್ಚರಿಯಿಂದ ಬೋರ್ಡ್ ನೋಡಿ ನಾವು ಮಂಗಳೂರಿನಲ್ಲಿದ್ದೇವೆಯೋ ಅಥವಾ ಉಡುಪಿಯಲ್ಲಿದ್ದೇವೆಯೋ ಎಂದು ಹುಬ್ಬೇರಿಸುವಂತಾಗಿದೆ.

ಅಂದಹಾಗೆ, ಇದು ಮಂಗಳೂರು ನಗರ ಪೊಲೀಸರ ಅಚಾತುರ್ಯವೋ ಅಥವಾ ಪೊಲೀಸ್ ಇಲಾಖೆಯು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆಯೋ ಎಂಬ ಪ್ರಶ್ನೆ ಸಾರ್ವಜನಿಕರಿಗೆ ಕಾಡಿದ್ದು ಸುಳ್ಳಲ್ಲ.

ಮಂಗಳೂರು ನಗರ ಪೊಲೀಸ್ ಮೇಲ್ದರ್ಜೆಗೇರಿದ್ದು, ಇಲ್ಲಿನ ಪ್ರಮುಖ ಸರ್ಕಲ್ ಬಳಿ ‘ಉಡುಪಿ ನಗರ ಸಂಚಾರ ಪೊಲೀಸ್’ನ ಬೋರ್ಡ್ ತಗುಲಿದ್ದು, ಹೇಗೆ? ತಗುಲಿಸಿದ್ದು ಯಾರು ಎಂಬುದು ಕೂಡಾ ಇದೀಗ ಯಕ್ಷ ಪ್ರಶ್ನೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News