ಕಾರ್ಗೊ ಹಡಗಿಗೆ ಬೆಂಕಿ: ಸಿಬ್ಬಂದಿಯ ರಕ್ಷಣೆ
Update: 2018-06-14 17:02 GMT
ಮಿಡ್ನಾಪುರ, ಜೂ. 14: ಆಂಧ್ರಪ್ರದೇಶದ ಕೃಷ್ಣಾಪುರದಿಂದ ಕೋಲ್ಕತ್ತಕ್ಕೆ ಸಂಚರಿಸುತ್ತಿದ್ದ ಸರಕು ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದರಲ್ಲಿದ್ದ 22 ಮಂದಿ ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಹೂಗ್ಲಿ ನದಿ ಹಾಗೂ ಬಂಗಾಳ ಕೊಲ್ಲಿ ಸಂಗಮಿಸುವ ಸಾಗರದ ಸಮೀಪ ಬುಧವಾರ ಮಧ್ಯರಾತ್ರಿ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿತು. ಕೂಡಲೇ ಹಾಲ್ಡಿಯಾ ಬಂದರಿನಿಂದ ತೆರಳಿದ ತಟ ರಕ್ಷಣಾ ಪಡೆಯ ಸಿಬ್ಬಂದಿ ಹಡಗಿನಲ್ಲಿದ್ದ ಸಿಬ್ಬಂದಿಯನ್ನು ರಕ್ಷಿಸಿದು. ಎಂವಿ ಎಸ್ಎಸ್ಎಲ್ ಕೋಲ್ಕತ್ತಾ ಹೆಸರಿನ ಹಡಗು 10,68,351 ಮೆಟ್ರಿಕ್ ಟನ್ ಸರಕನ್ನು 464 ಕಂಟೈನರ್ಗಳಲ್ಲಿ ಒಯ್ಯುತ್ತಿತ್ತು. ಹಡಗಿನ ಕಂಟೈನರ್ಗಳಿದ್ದ ಬಹುಪಾಲು ಸರಕು ಬೆಂಕಿಗಾಹುತಿಯಾಗಿದೆ. ಕೃಷ್ಣಪಟ್ಟಣಂ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿರುವ ಆಳ ನೀರಿನ ಬಂದರು.