ಹೊಳೆಗೆ ಬಿದ್ದು ಮೃತ್ಯು
Update: 2018-06-16 23:29 IST
ಬೈಂದೂರು, ಜೂ.17: ಅರೆಕಲ್ಲು ಮಹಾಲಿಂಗೇಶ್ವರ ದೇವಸ್ಥಾನದ ಹಿಂದು ಗಡೆ ಇರುವ ಸುಮನಾವತಿ ಹೊಳೆಯ ಬದಿಯಲ್ಲಿ ಕಾಯಿಯನ್ನು ಹೆಕ್ಕುವಾಗ ಬಿಜೂರು ಸಾಲಿಮಕ್ಕಿ ನಿವಾಸಿ ಅಣ್ಣಪ್ಪದೇವಾಡಿಗ (65) ಎಂಬವರು ಅಕಸ್ಮಿಕ ವಾಗಿ ಕಾಲು ಜಾರಿ ಹೊಳೆಗೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.