ಹೊಳೆಗೆ ಬಿದ್ದು ಮೃತ್ಯು
Update: 2018-06-17 18:05 GMT
ಕಾಪು, ಜೂ.17: ಮೀನು ಹಿಡಿಯಲು ಹೋದ ವ್ಯಕ್ತಿಯೊಬ್ಬರು ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಜೂ.16ರಂದು ಕಟಪಾಡಿ ಏಣಗುಡ್ಡೆ ಎಂಬಲ್ಲಿ ನಡೆದಿದೆ.
ಮೃತರನ್ನು ಕಟಪಾಡಿ ಏಣಗುಡ್ಡೆಯ ಕ್ಲೋಡಿ ಪಿರೇರಾ(46) ಎಂದು ಗುರು ತಿಸಲಾಗಿದೆ. ಬೆಳಗ್ಗೆ ಮನೆ ಸಮೀಪದ ಪಾಪನಾಶಿನಿ ಹೊಳೆಗೆ ಮೀನು ಹಿಡಿಯಲು ಹೋದ ಇವರು ನಾಪತ್ತೆಯಾಗಿದ್ದು, ರಾತ್ರಿ ವೇಳೆ ಅಲ್ಲೇ ಸಮೀಪದ ಹೊಳೆಯಲ್ಲಿ ಕ್ಲೋಡಿ ಪಿರೇರಾರ ಮೃತದೇಹ ಪತ್ತೆಯಾಯಿತು.
ಇವರು ಮೀನು ಹಿಡಿಯುವ ವೇಳೆ ಅಕಸ್ಮಿಕವಾಗಿ ಹೊಳೆಯ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.