​ಪಜೀರು: ಸಿಡಿಲು ಬಡಿದು ಮನೆಗೆ ಹಾನಿ

Update: 2018-06-19 08:58 GMT

ಕೊಣಾಜೆ, ಜೂ. 19: ಎಡೆಬಿಡದೆ ಸುರಿಯುತ್ತಿರುವ ಮಳೆಯ ನಡುವೆ ಪಜೀರು ಗ್ರಾಮದ ಬೆಂಗೋಡಿಪದವು ಬಳಿ ಮನೆಯೊಂದಕ್ಕೆ ಸಿಡಿಲು ಅಪಾರ ಹಾನಿ ಸಂಭವಿಸಿದ ಘಟನೆ ಮಂಗಳವಾರ ನಡೆದಿದ್ದು ,ಅದೃಷ್ಟವಶಾತ್ ಮನೆಮಂದಿ ಪಾರಾಗಿದ್ದಾರೆ.

ಪಜೀರು ಗ್ರಾಮದ ಬೆಂಗೋಡಿಪದವಿನ ಸದಾಶಿವ ಶೆಟ್ಟಿ ಎಂಬವರ ಮನೆಗೆ ಇಂದು ಮಧ್ಯಾಹ್ನ ಸಿಡಿಲು ಬಡಿದಿದೆ. ಸಿಡಿಲಿನ ಹೊಡೆತಕ್ಕೆ ಮನೆಯ ಗೋಡೆ ಬಿರುಕು ಬಿಟ್ಟಿದ್ದು, ಕಿಟಕಿ ಗಾಜುಗಳು ಪುಡಿಯಾಗಿವೆ. ಅಲ್ಲದೆ ಮನೆಯೊಳಗೆ ಇಲೆಕ್ಟ್ರಾನಿಕ್ಸ್ ವಸ್ತುಗಳು ಸುಟ್ಟು ಹೋಗಿ ಅಪಾರ ಹಾನಿ ಸಂಭವಿಸಿದೆ. ವಿದ್ಯುತ್ ಸಂಪರ್ಕದ ಮೀಟರ್ ಕೂಡಾ ಸುಟ್ಟು ಹೋಗಿದೆ.

ಸಿಡಿಲು ಮನೆಗೆ ಬಡಿದಾಗ ಮನೆಮಂದಿ ಇಬ್ಬರು ಮನೆಯೊಳಗೆ ಇದ್ದು, ಅವರು ಮತ್ತೊಂದು ಕೋಣೆಯೊಳಗೆ ಇದ್ದುದರಿಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News