ಬೆಳ್ತಂಗಡಿ: ಹೆದ್ದಾರಿಗೆ ಮರ ಬಿದ್ದು ರಿಕ್ಷಾ ಜಖಂ

Update: 2018-06-19 15:09 GMT

ಬೆಳ್ತಂಗಡಿ, ಜೂ. 19: ರಾಷ್ಟ್ರೀಯ ಹೆದ್ದಾರಿಯ ಬೆಳ್ತಂಗಡಿ-ಉಜಿರೆ ಮಧ್ಯೆ ಕಕ್ಯೇನ ಎಂಬಲ್ಲಿ ಮಂಗಳವಾರ ಸಂಜೆ ಮರವೊಂದು ಬಿದ್ದು ಅಟೋ ರಿಕ್ಷಾ ಜಖಂಗೊಂಡಿದ್ದು, ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.

ರಸ್ತೆ ಬದಿಯಲ್ಲಿದ್ದ ಮರ ಹೆದ್ದಾರಿಗೆ ಬಿದ್ದು ರಸ್ತೆಯಲ್ಲಿ ಸಂಚರಿಸುತ್ತಿದ್ದ ರಿಕ್ಷಾಕ್ಕೆ ಹಾನಿಯಾಗಿದೆ. ಅದರಲ್ಲಿದ್ದರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಮರದ ರೆಂಬೆಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು ತುಂಡಾಗಿದೆ.

ಸಂಚಾರದಲ್ಲಿ ವ್ಯತ್ಯಯ: ಹೆದ್ದಾರಿಗೆ ಮರಬಿದ್ದು ಸುಮಾರು 45 ನಿಮಿಷ ವಾಹನ ಸಂಚಾರ ಸ್ಥಗಿತಗೊಂಡಿತು. ಸ್ಥಳೀಯರು, ಮೆಸ್ಕಾಂ ಇಲಾಖೆ ಹಾಗೂ ಸಂಚಾರಿ ಠಾಣೆ ಪೊಲೀಸರು ಮರವನ್ನು ತೆರವು ಮಾಡುವಲ್ಲಿ ಸಹಕರಿಸಿದರು. ಎರಡು ಬದಿಯಿಂದಲೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಟ್ರಾಫಿಕ್ ಜಾಮ್ ಆಗಿದ್ದ ರಸ್ತೆಯನ್ನು ಸುಗಮ ಸಂಚಾರ ಪೊಲೀಸರು ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News