ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ

Update: 2018-06-19 17:50 GMT

ಮಂಗಳೂರು, ಜೂ.19: ಸಂತ ಅಲೋಶಿಯಸ್ ಕಾಲೇಜಿನ 2018-19ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆಯು ಮಂಗಳವಾರ ಮಧ್ಯಾಹ್ನ ಕಾಲೇಜಿನ ಎಲ್‌ಸಿಆರ್‌ಐ ಸಭಾಂಗಣದಲ್ಲಿ ನಡೆಯಿತು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಬಿ.ಎಸ್. ನಾಗೇಂದ್ರ ಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಿದರು. ಸಂತ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ರೆ.ಫಾ. ಡಯನೀಶಿಯಸ್ ವಾಜ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ರೆ.ಫಾ.ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು.

ಪ್ರೊ.ಬಿ.ಎಸ್.ನಾಗೇಂದ್ರ ಪ್ರಕಾಶ್, ತಮ್ಮ ಉದ್ಘಾಟನಾ ಭಾಷಣದಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಾ, ಅವರು ಕ್ಯಾಂಪನಲ್ಲಿ ಹಸಿರಾಗಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೆಂದು ತಿಳಿಸಿದರು. ಅದಕ್ಕಾಗಿ ಅವರ ಜೊತೆ ಕೈಜೋಡಿಸಬೇಕೆಂದು ಕೇಳಿದರು.

ಬಡ ವಿದ್ಯಾರ್ಥಿಗಳಿಗಾಗಿ ಅಭ್ಯುದಯಕ್ಕಾಗಿ ವಿದ್ಯಾರ್ಥಿಗಳು ಆಯೋಜಿಸಿದ ‘ಒಂದು ರೂಪಾಯಿ ನಾಣ್ಯದ ಕ್ರಾಂತಿ’ ಎಂಬ ಯೋಜನೆಯನ್ನು ಕೊಂಡಾಡಿದರು. ಅಲ್ಲದೆ, ಸಂತ ಅಲೋಶಿಯಸ್ ಕ್ಯಾಂಪಸ್‌ನ್ನು ಪ್ಲಾಸ್ಟಿಕ್ ಮುಕ್ತವಾಗಿಸಬೇಕೆಂದು ವಿದ್ಯಾರ್ಥಿಗಳಲ್ಲಿ ವಿನಂತಿಸಿದರು. ರೆ.ಫಾ. ಡಯನೀಶಿಯಸ್ ವಾಜ್ ಮಾತನಾಡಿ, ನಾಯಕತ್ವವು ಆಯ್ಕೆಯನ್ನು ಒಳಗೊಂಡಿದೆ ಮತ್ತು ಆಯ್ಕೆಗಳು ಯೋಜನೆಗಳನ್ನು ಒಳಗೊಂಡಿರುತ್ತವೆ ಎಂದರು.

ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಗುಣಗಳು ಇರಬೇಕು ಮತ್ತು ಅದು ನಾಯಕತ್ವಕ್ಕೆ ಬಹಳ ಅಗತ್ಯವಾದುದು ಎಂದು ಹೇಳಿದರು. ವಿದ್ಯಾರ್ಥಿಗಳು ಬದಲಾವಣೆಯ ಮಧ್ಯವರ್ತಿಗಳಾಗಿರಬೇಕೆಂದು ತಿಳಿಸಿದರು. ರೆ.ಫಾ.ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ವಿದ್ಯಾರ್ಥಿಗಳ ‘ಒಂದು ರೂಪಾಯಿ ನಾಣ್ಯದ ಕ್ರಾಂತಿ’ ಎಂಬ ಹೊಸ ಯೋಜನೆಯನ್ನು ಉತ್ತೇಜಿಸುತ್ತಾ ಶ್ಲಾಘಿಸಿದರು. ಅಲ್ಲದೆ, ಅವರು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣವನ್ನು ವಿಶೇಷ ಜವಾಬ್ದಾರಿಯೊಂದಿಗೆ ರೂಪಿಸಿಕೊಳ್ಳಬೇಕೆಂದು ಹೇಳಿ ವಿದ್ಯಾರ್ಥಿ ಸಂಘಕ್ಕೆ ಆಯ್ಕೆಯಾದ ಸದಸ್ಯರನ್ನು ಅಭಿನಂದಿಸಿದರು.

ಪ್ರಸಕ್ತ ಸಾಲಿನ ಚುನಾಯಿತ ವಿದ್ಯಾರ್ಥಿ ಸಂಘದ ನಾಯಕ. ನಾಯಕಿಯರು: ರೆಸ್ಟನ್ ಸ್ಟುವರ್ಟ್ ಲೋಬೊ (ತೃತೀಯ ಬಿ.ಕಾಂ.  ವಿದ್ಯಾರ್ಥಿ ಸಂಘದ ಅಧ್ಯಕ್ಷ), ಜಿನಿ ಶರ್ಲಿ ಸಾಜಿ (ತೃತೀಯ ಬಿ.ಎ.  ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ), ರೂಪಲ್ ಡಿಸೋಜ (ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ), ಲೋಯ್ಡ್ ವಿನೀತ್ ಸಿಕ್ವೇರಾ (ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ), ರೋಶನ್ ಸಂತೋಷ್ (ತೃತೀಯ ಬಿಬಿಎ, ಸ್ಪೀಕರ್), ಅಬ್ದುಲ್ಲಾ ನಂಗರತ್ (ದ್ವಿತೀಯ, ಉಪಸ್ಪೀಕರ್).

ವಿದ್ಯಾರ್ಥಿ ಸಂಘದ ನಿರ್ದೇಶಕ ಡಾ. ರತನ್ ಮೊಹಂತ ಸ್ವಾಗತಿಸಿದರು. ಉಪನಿರ್ದೇಶಕ ಡಾ. ಸಂತೋಷ್ ಗೋವಿಯಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜಿಸೆಲ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ರೆಲ್‌ಸ್ಟನ್ ಲೋಬೊ ವಂದಿಸಿದರು.

ಮೂಸಾ ಫಾಝಿಲ್‌ಗೆ ಸನ್ಮಾನ

ಕಾರ್ಯಕ್ರಮದಲ್ಲಿ ದ್ವಿತೀಯ ಬಿಬಿಎಂ ವಿದ್ಯಾರ್ಥಿ ಮೂಸಾ ಫಾಝಿಲ್ ಅವರನ್ನು ಸನ್ಮಾನಿಸಲಾಯಿತು. ಗ್ರಾಫಿಕ್ ಡಿಸೈನ್ ಪರಿಣತ ಫಾಝಿಲ್ ತಮ್ಮದೇ ಸಂಸ್ಥೆಯಾದ ಫಾಝಿಲ್ ಕ್ರಿಯೇಶನ್ಸ್ ಸಿಇಒ ಆಗಿದ್ದು, ಭಾರತದ ಅತ್ಯಂತ ಕಿರಿಯ ಉದ್ಯಮಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹಲವಾರು ಸಂಘ ಸಂಸ್ಥೆಗಳ ಪ್ರಶಸ್ತಿಗಳಿಗೆ ಪಾತ್ರರಾದ ಇವರು ಗೂಗಲ್ ಆಲೈನ್ ಮಾರ್ಕೆಟಿಂಗ್ ಫಂಡಮೆಂಟಲ್ಸ್ ಕ್ವಾಲಿಫಿಕೇಶನ್ ಸರ್ಟಿಫಿಕೇಟ್ ಮತ್ತು ಫೇಸ್ ಬುಕ್ ಸರ್ಟಿಫಿಕೇಟ್ ಪಡೆದಿದ್ದಾರೆ.

ಅವರು ಗೂಗಲ್ 106 ಪಾಠಗಳು ಮತ್ತು 26 ಗೂಗಲ್ ಡಿಜಿಟಲ್ ಬ್ಯಾಗಳನ್ನು ತೆರೆದಿದ್ದಾರೆ. ಈ ಕೋರ್ಸಿನಲ್ಲಿ 23 ಮೊಡ್ಯೂಲ್‌ಗಳಿದ್ದು, ಮಾರ್ಕೆಟಿಂಗ್ ಫಂಡಮೆಂಟಲ್ಸ್‌ನ ಇಮೇಲ್, ಸೋಶಿಯಲ್ ಮೀಡಿಯ, ಡಿಸ್‌ಪ್ಲೇ, ವೀಡಿಯೊ, -ಕಾಮರ್ಸ್, ಜಿಯೊಟಾರ್ಗೆಟಿಂಗ್ ಮತ್ತು ಎನಾಲಿಸಿಸ್ ಎಂಬ ವಿಷಯಗಳನ್ನೊಳಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News