ಬಂಟ್ವಾಳ: ಜವಾನ್ ಫ್ರೆಂಡ್ಸ್ ನಿಂದ ಸಚಿವ ಖಾದರ್ ಗೆ ಅಭಿನಂದನೆ
Update: 2018-06-24 13:27 GMT
ಬಂಟ್ವಾಳ, ಜೂ. 24: ಕಥೋಲಿಕ್ ಸಭಾ ಮಂಗಳೂರು ಪ್ರಾದೇಶಿಕ ಬಂಟ್ವಾಳ ವಲಯ ಸಮಿತಿ ವತಿಯಿಂದ ಮೊಡಂಕಾಪಿನಲ್ಲಿ ನಡೆದ ನೂತನ ಶಾಸಕರಿಗೆ ಅಭಿನಂದನಾ ಸಭೆಗೆ ಆಗಮಿಸಿದ ನಗರಾಭಿವೃದ್ದಿ ಮತ್ತು ವಸತಿ ಖಾತೆ ಸಚಿವ ಯುಟಿ ಖಾದರ್ ಅವರನ್ನು ಬಿ.ಸಿ.ರೋಡ್ ಕೈಕಂಬ ಪೊಳಲಿ ದ್ವಾರದ ಬಳಿ ಜವಾನ್ ಫ್ರೆಂಡ್ಸ್ ಬಿ.ಸಿ.ರೋಡ್ ಸನ್ಮಾನಿಸಿ ಅಭಿನಂದಿಸಿತು.
ಈ ಸಂದರ್ಭದಲ್ಲಿ ಜವಾನ್ ಫ್ರೆಂಡ್ಸ್ ಅಧ್ಯಕ್ಷ ರಿಯಾಝ್ ಜವಾನ್, ಉಪಾಧ್ಯಕ್ಷ ಸತ್ತಾರ್ ನಂದರಬೆಟ್ಟು, ಪ್ರಧಾನ ಕಾರ್ಯದರ್ಶಿ ಆಶಿಕ್ ಕುಕ್ಕಾಜೆ, ಕಾರ್ಯದರ್ಶಿ ನವಾಝ್ ಕೈಕಂಬ, ಬಶೀರ್ ಪರ್ಲಿಯಾ, ಬಿ.ಸಿ.ರೋಡ್ ಪರಿಸರದ ಶರೀಫ್ ಅಲ್ ಬದ್ರಿಯಾ, ಸಗೀರ್ ನಂದರಬೆಟ್ಟು, ಸಫ್ವಾನ್ ನಂದರಬೆಟ್ಟು, ಹಬೀಬ್ ಪರ್ಲಿಯಾ, ಸಾದತ್ ಪರ್ಲಿಯಾ, ಕಾಸಿಂ ಶಾಂತಿಅಂಗಡಿ, ನೂರ್ ಕೈಕಂಬ, ಸಫ್ವಾನ್ ತಾಳಿಪಡ್ಪು, ಅನ್ಸಾರ್ ನಂದರಬೆಟ್ಟು, ಹಫೀಝ್ ಶಾಂತಿಅಂಗಡಿ, ರಿಯಾನ್ ಕೈಕಂಬ, ನಾಸಿರ್ ಲುಲು, ಮುನ್ನ ನಂದರಬೆಟ್ಟು, ಮೆಹರಾಝ್ ನಂದರಬೆಟ್ಟು ಮತ್ತಿತರರು ಜೊತೆಗಿದ್ದರು.