ನಂದಳಿಕೆ ದೇವಸ್ಥಾನಕ್ಕೆ ಸಚಿವ ಖಾದರ್ ಭೇಟಿ

Update: 2018-06-24 16:38 GMT

ಮಂಗಳೂರು, ಜೂ.24: ಕಾರ್ಕಳ ಬೆಳ್ಮಣ್ ಸಮೀಪದ ನಂದಳಿಕೆ ಮಹಾಲಿಂಗೇಶ್ವರಿ ದೇವಸ್ಥಾನ ಹಾಗೂ ಸುಮಾರು 800 ವರ್ಷದಷ್ಟು ಹಳೆಯದಾದ ನಂದಳಿಕೆ ಚಾವಡಿ ಅರಮನೆಗೆ ಭೇಟಿ ನೀಡಿದ ಸಚಿವ ಯು.ಟಿ.ಖಾದರ್ ಭೇಟಿ ನೀಡಿದರು.

ನಂದಳಿಕೆ ಮಹಾಲಿಂಗೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ನಾಗಶಿಲೆ ಪ್ರತಿಷ್ಠಾಪಣೆ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್ ಭಾಗವಹಿಸಿದ್ದರು.

ಅರಮನೆಯಲ್ಲಿರುವ ಪ್ರಾಚೀನ ಕಾಲದ ಪಲ್ಲಕ್ಕಿ, ಅರಸರ ಯುದ್ಧ ಆಯುಧಗಳು ಮುಂತಾದವುಗಳನ್ನು ಕಂಡು ಚಾವಡಿ ಅರಮನೆಯ ಮರದ ಕೆತ್ತನೆಗಳಿಗೆ ಸಚಿವರು ಮನಸೋತರು. ನಂತರ ಅಲ್ಲಿನ ಆಡಳಿತ ಮೊಕ್ತೇಸರರಾದ ಸುಂದರ ರಾಮ ಹೆಗ್ಡೆ ಆರೋಗ್ಯ ವಿಚಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News