ಎಸ್‌ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರಾಧ್ಯಕ್ಷರಾಗಿ ಶಾಹುಲ್ ಹಮೀದ್ ಪುನರಾಯ್ಕೆ

Update: 2018-06-25 12:13 GMT


ಪುನರಾಯ್ಕೆ ಬಂಟ್ವಾಳ, ಜೂ. 25: ಎಸ್‌ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ಆಂತರಿಕ ಚುನಾವಣೆಯು ಗೂಡಿನಬಳಿಯ ಸಮುದಾಯ ಭವನದಲ್ಲಿ ರವಿವಾರ ಸಂಜೆ ನಡೆಯಿತು.

ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಮಾತನಾಡಿ, ಎಸ್‌ಡಿಪಿಐ ಪಕ್ಷದ ನಾಯಕರು ಆದರ್ಶ ಹಾಗೂ ನಾಯಕತ್ವದಿಂದ ಕೆಲಸ ಮಾಡಿದರೆ ಪಕ್ಷವು ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮುಂದಿನ ಅವಧಿಗೆ ಆಯ್ಕೆಯಾದ ನಾಯಕರು ಪಕ್ಷ ಸಂಘಟಿಸುವ ಜೊತೆಗೆ ಪಕ್ಷದ ಬಲವರ್ಧನೆಯನ್ನೂ ಕೂಡಾ ಮಾಡಬೇಕಿದೆ ಎಂದು ಸಲಹೆ ನೀಡಿದರು.

ಇದೇ ವೇಳೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಶಾಹುಲ್ ಹಮೀದ್ ಎಸ್.ಎಚ್. ಪುನರಾಯ್ಕೆಗೊಂಡರು. ಉಪಾಧ್ಯಕ್ಷರಾಗಿ ಖಲಂದರ್ ಪರ್ತಿಪ್ಪಾಡಿ, ಕಾರ್ಯದರ್ಶಿಯಾಗಿ ಇಸ್ಮಾಯೀಲ್ ಬಾವ, ಜೊತೆ ಕಾರ್ಯದರ್ಶಿಯಾಗಿ ಇಸ್ಹಾಕ್ ತಲಪಾಡಿ, ಕೋಶಾಧಿಕಾರಿಯಾಗಿ ಅಬೂಬಕರ್ ಮದ್ದ ಅವರನ್ನು ಆಯ್ಕೆ ಮಾಡಲಾಯಿತು.

ಯೂಸುಫ್ ಆಲಡ್ಕ, ಮುಬಾರಕ್ ಜಿ.ಬಿ., ಇಮ್ರಾನ್ ಪಿ.ಜೆ., ಮಾಲಿಕ್ ಕೊಳಕೆ, ಸತ್ತಾರ್ ಕಲ್ಲಡ್ಕ, ಅನ್ವರ್ ಆಲಡ್ಕರನ್ನು ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

ಚುನಾವಣಾ ರಿಟರ್ನಿಂಗ್ ಆಫೀಸರ್ ಆಗಿ ಸಲೀಂ ಕುಂಪನಮಜಲು ನಿರ್ವಹಿಸಿದರು. ಕಾರ್ಯಕ್ರಮಲ್ಲಿ ಮುಖಂಡರಾದ ಹನೀಫ್ ಖಾನ್, ಇಕ್ಬಾಲ್ ಗೂಡಿನಬಳಿ, ಇಜಾಝ್ ಅಹ್ಮದ್ ಉಪಸ್ಥಿತರಿದ್ದರು.

ಪುರಸಭಾ ಸದಸ್ಯ ಮುನೀಶ್ ಅಲಿ ಸ್ವಾಗತಿಸಿದರು. ಇಸ್ಮಾಯೀಲ್ ಬಾವ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News