ಸೀತಾಂಗೋಳಿಯಲ್ಲಿ ಯುವಕನಿಗೆ ಚೂರಿ ಇರಿತ : ಬೈಕ್ ನಲ್ಲಿ ಬಂದ ತಂಡದಿಂದ ಕೃತ್ಯ

Update: 2018-06-25 15:29 GMT

ಮಂಜೇಶ್ವರ,ಜೂ.25 : ಕುಂಬಳೆ ಠಾಣಾ ವ್ಯಾಪ್ತಿಯ ಸೀತಾಂಗೋಳಿಯಲ್ಲಿ ಬೈಕ್ ನಲ್ಲಿ ಬಂದ ತಂಡವೊಂದು ಯುವಕನಿಗೆ ಚೂರಿಯಿಂದ ಇರಿದ ಘಟನೆ ವರದಿಯಾಗಿದೆ. ಸೀತಾಂಗೋಳಿ ಮುಗುವಿನ ಅಬ್ದುಲ್ ಖಾದರ್ ಎಂಬವರ ಪುತ್ರ ಸೀತಾಂಗೋಳಿಯಲ್ಲಿ ಎಸ್.ಬಿ.ಟಿ ಅಲ್ಯುಮಿನಿಯಂ ಫ್ಯಾಬ್ರಿಕ್ಸ್ ನಡೆಸುತ್ತಿರುವ ಆರಿಫ್ (31) ಇರಿತಕ್ಕೊಳಗಾದ ಯುವಕ. 

2 ಬೈಕ್ ಗಳಲ್ಲಿ ಬಂದ ನಾಲ್ವರ ತಂಡ ಆರಿಫ್ ಮೇಲೆ ಮಾರಕಾಯುಧಗಳಿಂದ ದಾಳಿ ನಡೆಸಿದ್ದು, ಆರಿಫ್ ಇಲ್ಲಿನ ಪ್ರಾರ್ಥನಾ ಮಂದಿರಕ್ಕೆ ಓಡಿ ರಕ್ಷಣೆ ಪಡೆದಿದ್ದಾರೆ. ಈ ವೇಳೆ ತಂಡ ಪರಾರಿಯಾಗಿದೆ. ಗಂಭೀರ ಗಾಯಗೊಂಡ ಆರೀಫ್ ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News