ಕೊಲ್ಲೂರು: ವ್ಯಕ್ತಿಯ ಸಂಶಯಾಸ್ಪದ ಸಾವು; ದೂರು

Update: 2018-06-27 16:42 GMT

ಕೊಲ್ಲೂರು, ಜೂ.27: ಕೊಲ್ಲೂರು ಗ್ರಾಮದ ಮಾವಿನಕಾರು ಎಂಬಲ್ಲಿ ಜೂ. 25ರಂದು ರಾತ್ರಿ ವೇಳೆ ವ್ಯಕ್ತಿಯೊಬ್ಬರು ಸಂಶಯಾಸ್ಪದವಾಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಮಾವಿನಕಾರು ನಿವಾಸಿ ಚಂದ್ರಶೇಖರ ಎಂಬವರ ಮಗ ಪ್ರವೀಣ್  (28) ಎಂದು ಗುರುತಿಸಲಾಗಿದೆ. ಇವರು ಜೂ.25ರಂದು ರಾತ್ರಿ 8:30ರ ಸುಮಾರಿಗೆ ಮನೆಯಿಂದ ಊಟಕ್ಕೆ ಪಾರ್ಸೆಲ್ ತೆಗೆದು ಕೊಂಡು ಬರುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದರು.

ಜೂ.26ರಂದು ಬೆಳಗ್ಗೆ 8 ಗಂಟೆಗೆ ಮನೆಯ ಬಳಿಯ ಗದ್ದೆಯ ಅಂಚಿನ ಕಾಲುದಾರಿಯಿಂದ 12 ಅಡಿ ಆಳದ ನಾಗೇಂದ್ರ ನಾಯ್ಕ್ ಎಂಬವರ ತೋಟದ ತೆಂಗಿನ ಮರದ ಬುಡದಲ್ಲಿ ಪ್ರವೀಣ್ ಮೃತದೇಹ ಪತ್ತೆಯಾಗಿದೆ. ಮೃತರ ಮರಣದ ಬಗ್ಗೆ ಸಂಶಯವಿದ್ದು ಕಾನೂನು ಕ್ರಮ ಕೈಗೊಳ್ಳುವಂತೆ ಚಂದ್ರಶೇಖರ್ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News