ಆರೋಪಿಗೆ ಸಾರ್ವಜನಿಕ ಗಲ್ಲುಶಿಕ್ಷೆಗೆ ವಿಎಚ್ಪಿ ಆಗ್ರಹ
Update: 2018-07-02 18:58 IST
ಮಂಗಳೂರು, ಜೂ.2: ಮಧ್ಯಪ್ರದೇಶದಲ್ಲಿ ನಡೆದ ಬಾಲಕಿಯ ಅತ್ಯಾಚಾರ ಖಂಡಿಸಿ, ಆರೋಪಿಗೆ ಸಾರ್ವಜನಿಕ ಗಲ್ಲುಶಿಕ್ಷೆಗೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಸೋಮವಾರ ಸಂಜೆ ಧರಣಿ ನಡೆಸಿತು.
ಧರಣಿಯಲ್ಲಿ ವಿಎಚ್ಪಿ ಮುಖಂಡರಾದ ಜಗದೀಶ ಶೇಣವ, ಶಿವಾನಂದ ಮೆಂಡಲ್, ಬಜರಂಗದಳದ ಮುಖಂಡ ಶರಣ್ ಪಂಪ್ವೆಲ್, ಮಾತೃ ಮಂಡಳದ ಮುಖಂಡೆ ಆಶಾ ಜಗದೀಶ್, ನವೀನ್ ಕುತ್ತಾರ್ ಮತ್ತಿತರರು ಪಾಲ್ಗೊಂಡಿದ್ದರು.