ಎಸ್ಕೆಎಸ್ಸೆಸ್ಸೆಫ್ ದೂಮಲಿಕೆ ಶಾಖೆ: ಮದರಸದ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ವಿತರಣೆ

Update: 2018-07-04 17:17 GMT

ಬಂಟ್ವಾಳ,ಜು.04: ಎಸ್ಕೆಎಸ್ಸೆಸ್ಸೆಫ್ ದೂಮಲಿಕೆ ಶಾಖೆ ವತಿಯಿಂದ ಬಿಸ್ಮಿಲ್ಲಾ ಮದರಸ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಸಮಿತಿ ಉಪಾಧ್ಯಕ್ಷ H. E ಮುಹಮ್ಮದ್ ಹನೀಫ್ ವಹಿಸಿದ್ದರು. B.J.M ದೂಮಲಿಕೆ ಖತೀಬ್ A. M ಆದಂ ಮುಸ್ಲಿಯಾರ್ ಪ್ರಸ್ತುತ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಈ ವೇಳೆ ದೂಮಲಿಕೆ ಶಾಖಾ ಕಾರ್ಯದರ್ಶಿ, ಸದಸ್ಯರು, ಮಸೀದಿ ಆಡಳಿತ ಕಮಿಟಿ ಅಧ್ಯಕ್ಷ ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕಾರ್ಯದರ್ಶಿ ಮುಹಮ್ಮದ್ ಶರೀಫ್ ದೂಮಲಿಕೆ ಸ್ವಾಗತಿಸಿ, ಮದರಸ ಮುಹಲ್ಲಿಂ ಅಬ್ದುಲ್ ರಝಕ್ ಮುಸ್ಲಿಯಾರ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News