ಬಿ.ಎ. ಮೊಹಿದಿನ್ ನಿಧನ: ಯು.ಟಿ.ಖಾದರ್ ಕುಟುಂಬದಿಂದ ಸಂತಾಪ
Update: 2018-07-10 14:27 GMT
ಮಂಗಳೂರು, ಜು.10: ಯು.ಟಿ. ಫರೀದ್ ಅವರ ಅತ್ಯಂತ ಆತ್ಮೀಯ ಮಿತ್ರರಾಗಿದ್ದ ಬಜ್ಪೆಅಬ್ದುಲ್ ಖಾದರ್ ಮೊಹಿದಿನ್ ಅವರಿಗೆ ದೇವನು ಮಗ್ಫಿರತ್ ಮತ್ತು ಮರ್ಹಮತ್ ಅನುಗ್ರಹಿಸಲಿ ಹಾಗೂ ಅವರ ಕುಟುಂಬ ವರ್ಗಕ್ಕೆ ನಷ್ಟವನ್ನು ಸಹಿಸುವ ಸ್ಥೈರ್ಯ ದಯಪಾಲಿಸಲಿ ಎಂದು ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ.ಖಾದರ್, ರಾಜೀವ್ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯ ಡಾ.ಯು.ಟಿ. ಇಫ್ತಿಕಾರ್ ಹಾಗೂ ಯು.ಟಿ. ಫರೀದ್ ಕುಟುಂಬದ ಸರ್ವ ಸದಸ್ಯರು ಸಂತಾಪ ಸೂಚಿಸಿದ್ದಾರೆ.