ಪ್ರಗತಿಪರ ಕೃಷಿಕ ಲಕ್ಷ್ಮೀನಾರಾಯಣ ರಾವ್‌ಗೆ ಸನ್ಮಾನ

Update: 2018-07-11 12:29 GMT

ಉಡುಪಿ, ಜು.11: ಮಂಗಳೂರು ಪುರಭವನದಲ್ಲಿ ಇತ್ತೀಚೆಗೆ ನಡೆದ ಪಣಂಬೂರು ಕುಳಾಯಿ ಪಿ.ವಿ.ಐತಾಳ ಆಂಗ್ಲ ಭಾಷಾ ಯಕ್ಷಗಾನ ಮಂಡಳಿಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಗತಿಪರ ಕೃಷಿಕ, ಧಾರ್ಮಿಕ- ಸಾಮಾಜಿಕ ಮುಂದಾಳು ಮಟ್ಟಿ ಲಕ್ಷ್ಮೀನಾರಾಯಣ ರಾವ್ ಅವರನ್ನು ಸನ್ಮಾನಿಸಲಾಯಿತು.

ಕಟೀಲು ವೆಂಕಟರಮಣ ಆಸ್ರಣ್ಣ, ಮಂಗಳಾದೇವಿ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ರಮಾನಾಥ ಹೆಗ್ಡೆ, ಸಾಹಿತಿ ಎ.ಎಸ್.ಎನ್. ಹೆಬ್ಬಾರ್, ಸಂಘದ ಡಾ.ಸತ್ಯಮೂರ್ತಿ ಐತಾಳ, ಸುರೇಶಕುಮಾರ್, ಸಂತೋಷ ಐತಾಳ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News