ಬಡ್ಡಕಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರ ಕೊಲೆ ಯತ್ನ ಪ್ರಕರಣ: ತಲೆಮರೆಸಿದ್ದ ಮೂವರು ಆರೋಪಿಗಳ ವಶ

Update: 2018-07-11 14:47 GMT

ಬಂಟ್ವಾಳ, ಜು.11:ಕಳೆದ ತಿಂಗಳು ಬಂಟ್ವಾಳದ ಬಡ್ಡಕಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ, ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿದ್ದ ಮೂವರು ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ. 

ಬಂಟ್ವಾಳ ನಿವಾಸಿಗಳಾದ ಮನೋಹರ್, ಪ್ರದೀಪ್, ತಿಲಕ್ ಬಂಧಿತ ಆರೋಪಿಗಳು. ಫರಂಗೀಪೇಟೆಯಲ್ಲಿ ಬಂಟ್ವಾಳ ಸಿಐ ನಾಗರಾಜ್ ಅವರ ನೇತೃತ್ವದಲ್ಲಿ ಸಬ್ ಇನ್‍ಸ್ಪೆಕ್ಟರ್‍ ಗಳಾದ ಚಂದ್ರಶೇಖರ್, ಹರೀಶ್ ಮತ್ತವರ ಸಿಬ್ಬಂದಿ ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಸುರೇಂದ್ರ ಭಂಡಾರಿ, ಸತೀಶ್ ಕುಲಾಲ್, ಪೃಥ್ವಿರಾಜ್ ಶೆಟ್ಟಿಯನ್ನು ಕೆಲ ದಿನಗಳ ಹಿಂದೆಯಷ್ಟೆ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಒಟ್ಟು 10 ಕ್ಕೇರಿದೆ. 

ಜೂ. 11ರಂದು ಬಂಟ್ವಾಳ ಬಡ್ಡಕಟ್ಟೆಯಲ್ಲಿ ತಂಡವೊಂದು ಬಿಜೆಪಿ ಕಾರ್ಯಕರ್ತರಾದ ಗಣೇಶ್ ರೈ, ಪುಷ್ಪರಾಜ್, ಮನೋಜ್ ಮತ್ತು ಇತರರ ಮೇಲೆ ಕೊಲೆ ಯತ್ನ ನಡೆಸಿದ್ದಲ್ಲದೆ, ಆರೋಪಿಗಳ ಪೈಕಿ ಸುರೇಂದ್ರ ನಡು ರಸ್ತೆಯಲ್ಲಿ ತಲವಾರು ದಾಳಿಗೆ ಮುಂದಾಗಿದ್ದು, ಈ ಸಂಬಂಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News