ಆತೂರು: ನಫೀಸತುಲ್ ಮಿಸ್ರಿಯ ದಅ್ ವಾ ಕಾಲೇಜು ಶುಭಾರಂಭ

Update: 2018-07-11 15:08 GMT

ಮಂಗಳೂರು, ಜು.11: ಉಪ್ಪಿನಂಗಡಿ ಸಮೀಪದ ಆತೂರು ಹಳೇ ನೇರಂಕಿಯಲ್ಲಿ ಮುಹಿಯುದ್ದೀನ್ ಜುಮಾ ಮಸೀದಿಯ ವಠಾರದ ವಾದಿ ಹಿಕ್ಮದಲ್ಲಿ ನೂತನವಾಗಿ ಆರಂಭಿಸಲಾದ ನಫೀಸತುಲ್ ಮಿಸ್ರಿಯಾ ಮೆಮೋರಿಯಲ್ ದಅ್ ವಾ ಕಾಲೇಜು ಇತ್ತೀಚೆಗೆ ಉದ್ಘಾಟನೆಗೊಂಡಿತು.
ದ.ಕ. ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ನೂತನ ಕಾಲೇಜನ್ನು ಉದ್ಘಾಟಿಸಿದರು.
ಡಾ.ಶಾಹ್ ಉಸ್ತಾದರ ಅಧ್ಯಕ್ಷತೆ ವಹಿಸಿದ್ದರು.

ಅನಸ್ ತಂಙಳ್ ಗಂಡಿಬಾಗಿಲು ನೇತೃತ್ವದಲ್ಲಿ ಆಧ್ಯಾತ್ಮಿಕ ಮಜ್ಲಿಸ್ ನಡೆಯಿತು. ಆತೂರು ಮುದರ್ರಿಸ್ ಜುನೈದ್ ಜಿಫ್ರಿ ತಂಙಳ್ ದುಆಗೈದರು. ಸಂಸ್ಥೆಯ ವಕ್ತಾರ ಮಾಹಿನ್ ದಾರಿಮಿ ಸ್ವಾಗತಿಸಿದರು.
ಮೌಲಾನ ಯು.ಕೆ.ದಾರಿಮಿ, ಮೌಲಾನಾ ಚೊಕ್ಕಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಸ್ಥೆಯ ರೂವಾರಿ ಅಬ್ಬಾಸ್ ಭೂಮಿಕ, ಹಮೀದ್ ದಾರಿಮಿ ಆತೂರು, ಅಯೂಬ್, ಮುಹಮ್ಮದ್ ಕೂಟೇಲು, ಸಿದ್ದೀಕ್ ಫೈಝಿ ಕರಾಯ, ಅಬ್ದುಲ್ ರಹಿಮಾನ್ ಹಾಜಿ ಆತೂರು, ಮಾಜಿ ಅಧ್ಯಕ್ಷ ಇಬ್ರಾಹೀಂ ಹಾಜಿ, ಸುಲೈಮಾನ್ ಪನೆಬೈಲ್, ರಝಾಕ್ ದಾರಿಮಿ ನೇರಂಕಿ, ಬಿ.ಕೆ.ಲತೀಫ್ ಆತೂರು, ಹಸೈನಾರ್ ಹಾಜಿ ಕೊಯ್ಲ, ಅಬ್ದುಲ್ಲ ಆಝಾದ್ ನೆಕ್ಕರೆ, ರಝಾಕ್ ಗಂಡಿಬಾಗಿಲು, ಅಬ್ಬಾಸ್ ಪಿಲಿಗೂು ಮತ್ತಿತರರು ಉಪಸ್ಥಿತರಿದ್ದರು.

ಎಸ್.ಬಿ.ದಾರಿಮಿ ಸಂಸ್ಥೆಯನ್ನು ಮತ್ತು ಬೀವಿ ನಫೀಸತ್ ಬೀವಿಯನ್ನು ಪರಿಚಯಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಬೆಳ್ತಂಗಡಿ ಖತೀಬ್ ಹನೀಫ್ ದಾರಿಮಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News