ರೈಲಿನಲ್ಲಿ ದಂಪತಿಯ ಸೊತ್ತು ಕಳವು

Update: 2018-07-11 16:22 GMT

ಬೈಂದೂರು, ಜು.11: ನಾಗರ್‌ಕೊಯ್ಲ್ ಗಾಂಧಿದಾಮ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಜೂ.27ರಂದು ಪ್ರಯಾಣಿಸುತ್ತಿದ್ದ ದಂಪತಿಯ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಕಳವಾಗಿರುವ ಬಗ್ಗೆ ವರದಿಯಾಗಿದೆ.

ಗುಜರಾತ್ ಗಾಂಧಿದಾಮ್ ನಿವಾಸಿ ಅವಿನಾಶ್ ಆರ್.ಹೆಗ್ಡೆ ಜೂ.27ರಂದು ತನ್ನ ಹೆಂಡತಿಯೊಂದಿಗೆ ನಾಗರ್‌ಕೊಯ್ಲ್ ಗಾಂಧಿದಾಮ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಂಗಳೂರಿನಿಂದ ಗುಜರಾತಿನ ಗಾಂಧಿದಾಮ್‌ಗೆ ಪ್ರಯಾಣಿಸುತ್ತಿದ್ದರು. ಕುಂದಾಪುರ- ಮುರ್ಡೆಶ್ವರದ ಮಧ್ಯದಲ್ಲಿ ರೈಲು ಹೋಗುತ್ತಿದ್ದಾಗ ಅವರ ಎರಡು ಚಿನ್ನದ ಸರ, ಎರಡು ಚಿನ್ನದ ರಿಂಗ್, ಎರಡು ಮೊಬೈಲ್, ಪಾನ್ ಕಾರ್ಡ್, ಮನೆಯ ಕೀಲಿಕೈಗಳು, ಹೆಂಡತಿಯ ಗುರುತು ಚೀಟಿ, ಇತರ ವಸ್ತುಗಳು ಸೇರಿದಂತೆ ಒಟ್ಟು 1.50ಲಕ್ಷ ರೂ. ಮೌಲ್ಯದ ಸೊತ್ತುಗಳು ಕಳವಾಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News