×
Ad

​ಪ್ರತ್ಯೇಕ ಘಟನೆ: ಇಬ್ಬರ ಆತ್ಮಹತ್ಯೆ

Update: 2018-07-12 22:36 IST

 ಕುಂದಾಪುರ, ಜು.12: ತಾಲೂಕಿನ ಹೆಮ್ಮಾಡಿ ಗ್ರಾಮದ ಮಡಿವಾಳ ಕೆರೆ ಬಳಿ ಇರುವ ತೋಟದ ಜಾಗದಲ್ಲಿರುವ ಬಾವಿಗೆ ಹಾರಿ ಕಟ್‌ಬೆಲ್ತೂರಿನ ಸಿಲ್ವಿನ್ ಒಲಿವೀರಾ (50) ಎಂಬವರು ಜು.10ರ ಅಪರಾಹ್ನ 2:00ರಿಂದ ಜು.11ರ ಅಪರಾಹ್ನ 3:00ರ ನಡುವಿನ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಬ್ರಿ: ಉಡುಪಿ ತಾಲೂಕು ಕೆಂಜೂರು ಗ್ರಾಮದ ಕೆಂಜೂರು ಪಡುಮನೆಯ ಶೇಖರ ನಾಯ್ಕ (32) ಎಂಬವರು ನಿನ್ನೆ ಅಪರಾಹ್ನ 11ರಿಂದ 12:30ರ ನಡುವಿನ ಅವಧಿಯಲ್ಲಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News