ಪುತ್ತೂರಿನ ಸ್ವರ್ಣೋದ್ಯಮಿ ಜಿ.ಎಲ್ ಆಚಾರ್ಯ ನಿಧನ

Update: 2018-07-13 09:04 GMT

ಪುತ್ತೂರು, ಜು.13: ಫುತ್ತೂರಿನ ಪ್ರಖ್ಯಾತ ಸ್ವರ್ಣೋದ್ಯಮಿ ಜಿ.ಎಲ್. ಆಚಾರ್ಯ (94) ಅವರು ಅಲ್ಪಕಾಲದ ಅನಾರೋಗ್ಯದಿಂದ ಇಂದು ಬೆಳಗ್ಗೆ ನಿಧನರಾದರು.

ಜಿ.ಎಲ್ ಆಚಾರ್ಯ ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. 

ಮೂಲತಃ ಉಡುಪಿಯ ಗುಂಡಿಬೈಲಿನವರಾಗಿದ್ದ  ಗುಂಡಿಬೈಲು ಲಕ್ಷ್ಮೀನಾರಾಯಣ ಆಚಾರ್ಯರು 1957ರಲ್ಲಿ ಪುತ್ತೂರಿನಲ್ಲಿ ಜಿ.ಎಲ್ ಚಿನ್ನಾಭರಣ ಉದ್ಯಮವನ್ನು ಆರಂಭಿಸಿದ್ದರು. ಮಂಗಳೂರಿನ ಲಕ್ಷ್ಮೀದಾಸ್ ಜ್ಯುವೆಲ್ಲರಿಯಲ್ಲಿ ಪಾಲುದಾರರಾಗಿರುವ ಜಿ.ಎಲ್ ಆಚಾರ್ಯರು ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೂ ಗಮನಾರ್ಹ ಕೊಡುಗೆ ನೀಡಿದ್ದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ, ಪುತ್ತೂರು ವಿಶ್ವ ಹಿಂದೂ ಪರಿಷತ್  ಮತ್ತು  ರೋಟರಿ ಕ್ಲಬ್ ಪುತ್ತೂರು ಸೇರಿದಂತೆ ಹಲವು ಸಂಘ ಸಂಸ್ಥೆಗಳ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News