×
Ad

ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ವತಿಯಿಂದ 'ರಿನೇಝಾಂಸ್ '

Update: 2018-07-15 23:09 IST

ಉಳ್ಳಾಲ, ಜು. 15: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್  ಉಳ್ಳಾಲ ಸೆಕ್ಟರ್ ಮತ್ತು ಸುನ್ನೀ ಯುವಜನ ಸಂಘ ಉಳ್ಳಾಲ ಸೆಂಟರ್ ಇದರ ಜಂಟಿ ಆಶ್ರಯದಲ್ಲಿ 'ರಿನೇಝಾಂಸ್ '( ಪುನರುತ್ಥಾನ) ತರಬೇತಿ ಶಿಬಿರ ಮೇಲಂಗಡಿ ತಾಜುಲ್ ಉಲಮಾ ಸುನ್ನೀ ಸೆಂಟರ್ ನಲ್ಲಿ ನಡೆಯಿತು.

ಕೆ. ಸಿ.ಎಫ್. ಅಂತಾರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಎಸ್.ಪಿ. ಹಂಝ ಸಖಾಫಿ ತರಬೇತಿ ನಡೆಸಿ, ಪ್ರಸ್ತುತ ಕಾಲದ ಬಗ್ಗೆ ಚಿಂತನೆ ಮೂಡಿಸುವ ಮತ್ತು ಮಾನಸಿಕವಾಗಿ ಬದಲಾವಣೆಗೊಳ್ಳಲು ಪ್ರೇರಣೆ ನೀಡಿದರು. ಸೆಕ್ಟರ್ ಅಧ್ಯಕ್ಷ  ಮುಸ್ತಫಾ ಮಾಸ್ಟರ್ ಮುಕ್ಕಚೇರಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಅತಿಥಿಯಾಗಿ  ಅಲ್ತಾಫ್ ಕುಂಪಲ, ಮೇಲಂಗಡಿ ಬ್ರಾಂಚ್ ಅಧ್ಯಕ್ಷ  ಬಶೀರ್ ಸಖಾಫಿ ಉಸ್ತಾದ್, ನಿಝಾಮುದ್ದೀನ್ ಷಾ ಮಂಗಳೂರು ಉಪಸ್ಥಿತರಿದ್ದರು.
ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಹಂಝ ಸುಂದರಿಭಾಗ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News