ಕನ್ಯಾನ: ಸಮಸ್ತ ನೂತನ ಕಚೇರಿ ಉದ್ಘಾಟನೆ

Update: 2018-07-16 13:08 GMT

ಬಂಟ್ವಾಳ, ಜು. 16: ಕೇರಳ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ದೀನೀ ವಿಜ್ಞಾನದ ಕ್ರಾಂತಿ ಸೃಷ್ಟಿಸಿರುವುದರಲ್ಲಿ ಸಮಸ್ತದ ಪಾತ್ರ ಮಹತ್ತರವಾಗಿದೆ ಎಂದು ಅಮಾನ್ ಟೂರ್ಸ್ ಮಾಲಕ ಅಬ್ದುಲ್ ಹಮೀದ್ ಬಾಕವಿ ಅಭಿಪ್ರಾಯಪಟ್ಟಿದ್ದಾರೆ.

ಅವರು ಸೋಮವಾರ ಕನ್ಯಾನದ ಸಮಸ್ತ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಅಬ್ದುಲ್ಲಾ ಮುಸ್ಲಿಯಾರ್ ಕುಕ್ಕಾಜೆ ಕಾರ್ಯಕ್ರಮ ಉದ್ಘಾಟಿಸಿದರು. ಕನ್ಯಾನ ಗ್ರಾಪಂ ಉಪಾಧ್ಯಕ್ಷ ಕೆ.ಪಿ.ಅಬ್ದುಲ್ ರಹಿಮಾನ್ ಹಾಗೂ ಸದಸ್ಯರಾದ ಅಬ್ದುಲ್ ಮಜೀದ್, ಅಬೂಬಕರ್ ಅಂಗ್ರಿ, ಕಲಂದರ್ ಕುಕ್ಕಾಜೆ, ಹನೀಫ್ ಕನ್ಯಾನ, ಮಜೀದ್ ಕಣಿಯೂರು, ಕೆ.ಪಿ.ಅಝೀಝ್ ಹಾಗೂ ಇನ್ನಿತರ ಪ್ರಮುಖರು ಭಾಗವಹಿಸಿದ್ದರು.

ಹಮೀದ್ ಮುಸ್ಲಿಯಾರ್ ಕೊನಾಲೆ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಇತ್ತೀಚೆಗೆ ನಿಧನ ಹೊಂದಿದ ಪ್ರಸಿದ್ಧ ಸೂಫಿವರ್ಯರೂ, ಧಾರ್ಮಿಕ ಪಂಡಿತರೂ ಆದ ಪಯ್ಯಕ್ಕಿ ಉಸ್ತಾದರ ಅನುಸ್ಮರಣೆ ಮತ್ತು ತಹ್ಲೀಲ್ ಸಮರ್ಪಿಸಿ ದುಆ ಮಾಡಲಾಯಿತು. ಉಸ್ತಾದ್ ರಫೀಕ್ ಫೈಝಿ ಸ್ವಾಗತಿಸಿ, ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News