ಪಿಎಫ್ಐ ಫರಂಗಿಪೇಟೆ ವತಿಯಿಂದ ಈದ್ ಮಿಲನ್ ಸ್ಪೋಟ್ಸ್

Update: 2018-07-16 13:21 GMT

ಫರಂಗಿಪೇಟೆ, ಜು. 16 : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಿಸಿರೋಡ್ ವಲಯ ವತಿಯಿಂದ ಫರಂಗಿಪೇಟೆಯಲ್ಲಿ ರವಿವಾರ ಈದ್ ಮಿಲನ್ ಸ್ಪೋಟ್ಸ್ ನಡೆಯಿತು.

ಪಿಎಫ್ಐ ಬಿಸಿರೋಡ್ ವಲಯಾದ್ಯಕ್ಷ ನಿಸಾರ್ ವಳವೂರು ದ್ವಜಾರೋಹಣಗೈದರು. ನಂತರ ಮಾತನಾಡಿದ ಪಿಎಫ್ಐ ಬಂಟ್ವಾಳ  ತಾಲೂಕು ಕಾರ್ಯದರ್ಶಿ ಸಲೀಮ್ ಕುಂಪನಮಜಲ್ ಆರೋಗ್ಯವಂತ ಸಮಾಜಕ್ಕೆ ದೈಹಿಕ, ಮಾನಸಿಕವಾದ ತರಬೇತು ಅಗತ್ಯವಾಗಿದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಎಸ್.ಡಿ.ಪಿ.ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಎಸ್.ಎಚ್, ಮಂಗಳೂರು ಕ್ಷೇತ್ರ ಸಮಿತಿ ಉಪಾಧ್ಯಕ್ಷ ಸುಲೈಮಾನ್ ಉಸ್ತಾದ್, ಕಾರ್ಯದರ್ಶಿ ಝಹೂರು ತುಂಬೆ, ಪಿಎಫ್ಐ ಫರಂಗಿಪೇಟೆ ವಲಯಾಧ್ಯಕ್ಷ ನಝೀರ್ ಹತ್ತನೇಮೈಲ್ ಕಲ್ಲು, ತುಂಬೆ ವಲಯಾಧ್ಯಕ್ಷ ಸಿರಾಜ್ ತುಂಬೆ, ಪರ್ಲಿಯಾ ವಲಯಾಧ್ಯಕ್ಷ ಅಕ್ಬರ್ ಪರ್ಲಿಯಾ, ಅರ್ಕುಳ ವಲಯಾಧ್ಯಕ್ಷ ರಶೀದ್ ಅರ್ಕುಳ, ಎಸ್.ಡಿ.ಪಿ.ಐ ಪುದು ಗ್ರಾಮ ಸಮಿತಿ ಅಧ್ಯಕ್ಷ ಇಕ್ಬಾಲ್ ಅಮೆಮಾರ್, ಐ.ಎಫ್.ಎಫ್ ಸದದ್ಯರಾದ ಬಶೀರ್ ಅಮೆಮಾರ್, ಶಬೀರ್ ರಹಿಮಾನ್, ಇಸ್ಮಾಯಿಲ್ ತುಂಬೆ ಉಪಸ್ಥಿತರಿದ್ದರು.

ವಿವಿಧ ಕ್ರೀಡಾ ಕೂಟ ಸ್ಪರ್ಧೆಯಲ್ಲಿ ಫರಂಗಿಪೇಟೆ ವಲಯ ಚಾಂಪಿಯನ್ ಆಗಿ ಹೊರಹೊಮ್ಮಿದೆ. ದ್ವಿತೀಯ ಸ್ಥಾನವನ್ನು ಅರ್ಕುಳ ವಲಯ ಪಡೆದುಕೊಂಡಿತು. ಇರ್ಫಾನ್ ತುಂಬೆ ಸ್ವಾಗತಿಸಿ, ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News