ಬ್ಯಾರಿ ನಿಖಾಃ ಹೆಲ್ಪ್ ಲೈನ್ : ನೂತನ ಸಮಿತಿ ರಚನೆ

Update: 2018-07-18 15:05 GMT
ಇರ್ಫಾನ್ ಕಲ್ಲಡ್ಕ - ನೌಶಾದ್ ಅಮ್ಮೆಂಬಳ

ಮಂಗಳೂರು, ಜು. 18: ಕಳೆದೆರಡು ವರ್ಷಗಳಿಂದ ನಾನಾ ರೀತಿಯಲ್ಲಿ ಹಲವಾರು ಯೋಜನೆಗಳೊಂದಿಗೆ ನೆರವಾಗುತ್ತಾ ಬಂದಿರುವ ಬ್ಯಾರಿ ನಿಖಾಃ ಹೆಲ್ಪ್ ಲೈನ್ ನ ನೂತನ ಸಮಿತಿಯು ತಂಡದ ಸ್ಥಾಪಕಾಧ್ಯಕ್ಷ ರಶೀದ್ ರಾಶ್ ಬ್ಯಾರಿ ಅವರ ಸಮ್ಮುಖದಲ್ಲಿ ರಚನೆಯಾಯಿತು.

ಮುಂದಿನ ಎರಡು ವರ್ಷಗಳಲ್ಲಿ ಹಲವಾರು ಉಪಯುಕ್ತ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಉದ್ದೇಶವನ್ನು ತಂಡವು ಹೊಂದಿದ್ದು, ಆಯಾ ಜವಾಬ್ದಾರಿಯನ್ನು ಸದಸ್ಯರಿಗೆ ವಹಿಸಲಾಗಿದೆ ಎಂದು ಅವರು ತಿಳಿಸಿದರು. 

ತಂಡದ ಮುಖ್ಯ ಸಂಚಾಲಕರಾಗಿ ಅಶ್ರಫ್ ಶಿರ್ವ, ಸೌದಿ ಅರೇಬಿಯಾದ  ಅಧ್ಯಕ್ಷರಾಗಿ ನೌಶಾದ್ ಅಮ್ಮೆಂಬಳ, ಪ್ರಧಾನ ಕಾರ್ಯದರ್ಶಿಯಾಗಿ ಮಜೀದ್ ಉಪ್ಪಿನಂಗಡಿ ಹಾಗೂ ಅನಸ್ ವಿಟ್ಲ, ಯುಎಇ ಅಧ್ಯಕ್ಷರಾಗಿ ಇರ್ಫಾನ್ ಕಲ್ಲಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಕಲಂದರ್ ರಿಝ್ವಿ ಬೆಜ್ಜವಳ್ಳಿ ಹಾಗೂ ಸಾದತ್ ಉಳ್ಳಾಲ, ರಾಜ್ಯ ಉಪಾಧ್ಯಕ್ಷರಾಗಿ ವಹಾಬ್ ಗೂಡಿನಬಳಿ ಹಾಗೂ ಸುಹೈಲ್ ತೊಕ್ಕೊಟ್ಟು, ವಲಯಾಧ್ಯಕ್ಷರಾಗಿ ಆಶಿಕ್ ಕುಕ್ಕಾಜೆ ಹಾಗೂ ಖಾಲಿದ್ ಮಂಗಳೂರು, ಪ್ರಧಾನ ಕಾರ್ಯದರ್ಶಿಯಾಗಿ ಮಜೀದ್ ಬಿಕರ್ನಕಟ್ಟೆ ಹಾಗೂ  ಶರೀಫ್ ಬಿ.ಸಿ.ರೋಡ್ ,  ಜೊತೆ ಕಾರ್ಯದರ್ಶಿಯಾಗಿ ಅಲೀಮ್ ಗೂಡಿನಬಳಿ, ಹಫೀಝ್ ಕೈಕಂಬ, ಅಶ್ಫಾಕ್ ಪೂಂಜಲ್ ಕಟ್ಟೆ, ಆರಿಫ್ ಬಜಾಲ್ ಅವರನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News